Advertisement

ನೂತನ ಮೈತ್ರಿ ಸರ್ಕಾರ ಸಾರ್ವಜನಿಕರ ನಿರೀಕ್ಷೆ

12:08 PM May 23, 2018 | Team Udayavani |

ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿಕೂಟದಲ್ಲಿ ನೂತನ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿರುವ ಕುಮಾರಸ್ವಾಮಿಯವರ ಮೇಲೆ ರೈತ ಸಾಲಮನ್ನಾ, ಉದ್ಯೋಗ ಸೃಷ್ಟಿ, ನೀರಾವರಿ ಯೋಜನೆ, ಪ್ರಣಾಳಿಕೆಯ ಭರವಸೆಗಳ ಈಡೇರಿಕೆ ಸೇರಿದಂತೆ ನಾಗರಿಕರಿಂದ ಹಲವು ನಿರೀಕ್ಷೆಗಳು ವ್ಯಕ್ತವಾಗುತ್ತಿವೆ. ಈ ಸಮಯದಲ್ಲಿ ನಗರದ ಜನರನ್ನು ಉದಯವಾಣಿ ಸಂಪರ್ಕಿಸಿದಾಗ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವುದು ಹೀಗೆ..

Advertisement

ರಾಜ್ಯದ ರೈತರು ಸಂಕಷ್ಟದಲ್ಲಿ ಇದ್ದಾರೆ. ಸಾಲಮನ್ನಾ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ಕುಮಾರ ಸ್ವಾಮಿ ಬರುತ್ತಾರೆ ಎಂಬ ನಿರೀಕ್ಷೆ ಇದೆ.
-ಕೃಷ್ಣ, ಚಿಕ್ಕಲ್ಲಸಂದ್ರದ ನಿವಾಸಿ.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕುಮಾರ ಸ್ವಾಮಿ ಅವರು ದಕ್ಷ ಆಡಳಿತ ನೀಡಿದ್ದಾರೆ. ಉತ್ತಮ ವ್ಯಕ್ತಿತ್ವದ ಮನುಷ್ಯ. ಕಾಂಗ್ರೆಸ್‌-ಬಿಜೆಪಿ ಅವರ ಮಾತು ಕೇಳದೆ ಅಧಿಕಾರ ಪೂರ್ಣಗೊಳಿಸಲಿ.
-ಚಂದ್ರಶೇಖರ್‌,ಬಸವನಗುಡಿ.

ಕುಮಾರಸ್ವಾಮಿ ಅವರು ಕೆಲಸ ಮಾಡುವಂತ ವ್ಯಕ್ತಿ. ಅವರ ಆಡಳಿತ ಅವಧಿಯಲ್ಲಿ ಇಡೀ ರಾಜ್ಯ ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ ಎಂಬ ನಿರೀಕ್ಷೆ ಇದೆ.
-ಸತೀಶ್‌, ರಾಮನಗರ.

ಕುಮಾರಸ್ವಾಮಿ ಅವರ ಆಡಳಿತದ ಬಗ್ಗೆ ಬಹಳಷ್ಟು ನಿರೀಕ್ಷೆಯನ್ನು ಇಟ್ಟಿಕೊಂಡಿದ್ದೇನೆ. ಅಧಿಕಾರಿಗಳ ನಿರ್ಲಕ್ಷ ಕಾರಣದಿಂದಾಗಿ ಹಲವು ಸವಲತ್ತುಗಳು ಹಿರಿಯರ ಕೈ ಸೇರುತ್ತಿಲ್ಲ. ಇದನ್ನು ಸರಿಪಡಿಸುತ್ತಾರೆ ಎಂಬ ನಂಬಿಕೆಯಿದೆ.
-ಸುಲೋಚನಾ ಶೇಷಾದ್ರಿಪುರ ನಿವಾಸಿ.

Advertisement

ಕುಮಾರಣ್ಣ ಅವರು ಬಡವರ ಆಶಾಕಿರಣ ಎಂದು ಬಣ್ಣಿಸಿಕೊಂಡಿದ್ದಾರೆ. ಬಿಬಿಎಂಪಿ ಸೇರಿದಂತೆ ಹಲವು ಇಲಾಖೆಯಲ್ಲಿ  ಹೊರ ಗುತ್ತಿಗೆಯಲ್ಲಿ ದುಡಿಯುತ್ತಿದ್ದಾರೆ. ಅವರ ನೆರವಿಗೆ ಬರುತ್ತಾರೆ ಎಂಬ ನಂಬಿಕೆ ಇಟ್ಟುಕೊಂಡಿದ್ದೇನೆ.
-ವಿಜಯಮ್ಮ, ಮಲ್ಲೇಶ್ವರ ನಿವಾಸಿ. 

ನಾವು ಬಡವರು, ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ. ಆದರೆ ನಮ್ಮ ಮಕ್ಕಳನ್ನು ಓದಿಸುವಂತಹ ಪರಿಸ್ಥಿತಿಯಲ್ಲಿ ನಾವು ಇಲ್ಲ. ಕುಮಾರ ಸ್ವಾಮಿ ಅವರು ಬಡ ಮಕ್ಕಳ ಓದಿನ ಸಹಾಯಕ್ಕೆ ಬರಲಿ.
-ನಾಗಮ್ಮ, ಸಂಪಿಗೆ ರಸ್ತೆ ನಿವಾಸಿ.

ನಾನು ಸರ್ಕಾರಿ ಇಲಾಖೆಯೊಂದರಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇನೆ. ಆದರೆ ನನಗೂ ಸೇರಿದಂತೆ ಹಲವರಿಗೆ ಉದ್ಯೋಗ ಭದ್ರತೆಯ ಭಯ ಕಾಡುತ್ತಿದೆ. ಇದನ್ನು ಕುಮಾರಸ್ವಾಮಿ ಅವರು ಸಿಎಂ ಆದ ಮೇಲೆ ಸರಿಪಡಿಸುತ್ತಾರೆ  ಎಂಬ ನಿರೀಕ್ಷೆಯಿದೆ.
-ಪದ್ಮಾವತಿ, ಶೇಷಾದ್ರಿ ಪುರದ ನಿವಾಸಿ. 

ಯುವಕರು ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಅವರು ಭವಿಷ್ಯದ ಯೋಜನೆಗಳನ್ನು ರೂಪಿಸಬೇಕು. ಉದ್ಯೋಗಕ್ಕಾಗಿ ಅಲೆಯುವುದನ್ನು ತಪ್ಪಿಸಬೇಕು.
-ಸೈಫ‌ುದ್ದೀನ್‌, ಅತ್ತಿಬೆಲೆ ನಿವಾಸಿ.

ಕುಮಾರಸ್ವಾಮಿ ಅವರ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ. ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವರು ಎಂಬ ನಂಬಿಕೆ ಇದೆ.
-ಅಭಿಷೇಕ, ಸೇವಾನಗರದ ನಿವಾಸಿ.

ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗ್ಬೇಕು ಎಂಬ ನಿರೀಕ್ಷೆಯಲ್ಲಿ ಜನರಿದ್ದರು. ಅದು, ಈಗ ಮತ್ತೆ ಈಡೇರಿದೆ. ನಾಡಿನ ಒಳಿತಿಗಾಗಿ ಹೊಸ ಯೋಜನೆಗಳನ್ನು ತರುತ್ತಾರೆ ಎಂಬ ನಿರೀಕ್ಷೆ ಇದೆ.
-ಅವಿನಾಶ್‌.

Advertisement

Udayavani is now on Telegram. Click here to join our channel and stay updated with the latest news.

Next