Advertisement

CRIME: ನಶೆಯಲ್ಲಿ ಸ್ನೇಹಿತನ ಕುತ್ತಿಗೆ ಬಿಗಿದು ಕೊಲೆಗೈದವ ಸೆರೆ

01:02 PM Dec 24, 2023 | Team Udayavani |

ಬೆಂಗಳೂರು: ಮದ್ಯದ ಅಮಲಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಸ್ನೇಹಿತನನ್ನು ಸ್ಕಾರ್ಫ್ ನಿಂದ ಕುತ್ತಿಗೆ ಬಿಗಿದು ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಜಾರ್ಖಂಡ್‌ ಮೂಲದ ಬಾಬು ಲಾಲ್‌ ಸಿಂಗ್‌(32) ಬಂಧಿತ.

ಈತ ಡಿ.18ರಂದು ಸ್ನೇಹಿತ ಜಿತೇಂದ್ರ ಎಂಬಾತನನ್ನು ಕೊಲೆಗೈದಿದ್ದ. ಉತ್ತರ ಪ್ರದೇಶ ಮೂಲದ ಜಿತೇಂದ್ರ ಮತ್ತು ಜಾರ್ಖಂಡ್‌ ಮೂಲದ ಬಾಬು ಲಾಲ್‌ ಸಿಂಗ್‌ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಬಾಗಲೂರಿನಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು. ಒಂದೇ ಪ್ರದೇಶದಲ್ಲಿ ಅಕ್ಕ-ಪಕ್ಕ ವಾಸವಾಗಿದ್ದರು. ಡಿ.18ರಂದು ಜಿತೇಂದ್ರಗೆ ಕರೆ ಮಾಡಿದ ಆರೋಪಿ ಬಾಬು ಲಾಲ್‌ ಸಿಂಗ್‌ ಮದ್ಯ ಸೇವಿಸಲು ಕರೆದಿದ್ದಾನೆ. ಬಳಿಕ ಇತರೆ ಸ್ನೇಹಿತರ ಜತೆ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ಆದರೂ ಆರೋಪಿ, ಜಿತೇಂದ್ರನಿಗೆ ಇನ್ನಷ್ಟು ಮದ್ಯ ಸೇವಿಸುವಂತೆ ಒತ್ತಾಯಿಸಿದ್ದ. ಅದರಿಂದ ಬೇಸರಗೊಂಡ ಜಿತೇಂದ್ರ, ಪಾರ್ಟಿ ಸ್ಥಳದಿಂದ ದೂರ ಹೋಗಿದ್ದಾನೆ. ಅದನ್ನು ಕಂಡ ಆರೋಪಿ, ಜಿತೇಂದ್ರ ಇರುವ ಸ್ಥಳಕ್ಕೆ ಬಂದು, ಮದ್ಯ ಸೇವಿಸುವಂತೆ ಕೈ ಹಿಡಿದು ಎಳೆದಾಡಿದ್ದಾನೆ. ಅದರಿಂದ ಕೋಪಗೊಂಡ ಜಿತೇಂದ್ರ, ಆರೋಪಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಅದು ವಿಕೋಪಕ್ಕೆ ಹೋದಾಗ, ಬಾಬು ಲಾಲ್‌ ಸಿಂಗ್‌, ತನ್ನ ಕುತ್ತಿಗೆಯಲ್ಲಿದ್ದ ಸ್ಕಾರ್ಫ್ ನಿಂದ ಜಿತೇಂದ್ರನ ಕುತ್ತಿಗೆ ಬಿಗಿದು ಕೊಲೆಗೈದು, ಪಕ್ಕದ ಪೋದೆಯಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next