Advertisement

ಹೆಬ್ಟಾಳವನ್ನು ಮಾದರಿ ಕ್ಷೇತ್ರ ಮಾಡುವುದೇ ಪ್ರಮುಖ ಗುರಿ

11:35 AM May 10, 2018 | |

ಬೆಂಗಳೂರು: “ಹೆಬ್ಟಾಳವನ್ನು ಮಾದರಿ ಕ್ಷೇತ್ರವನ್ನಾಗಿಸುವುದೇ ನನ್ನ ಪ್ರಮುಖ ಗುರಿ,’ ಎಂದು ಹೆಬ್ಟಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ವೈ.ಎ ನಾರಾಯಣಸ್ವಾಮಿ ಹೇಳಿದರು.

Advertisement

ಬುಧವಾರ ಕ್ಷೇತ್ರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದ ಅವರು, ಹೆಬ್ಟಾಳ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ
ಈಗಾಗಲೇ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದೇನೆ. ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದು ಪಾರದರ್ಶಕವಾದ ಆಡಳಿತ ನೀಡಿದ್ದೇನೆ.

ಮುಂದಿನ ಐದು ವರ್ಷಗಳಲ್ಲಿ ಸ್ವಚ್ಚ ಸುಂದರ ಮತ್ತು ಸುರಕ್ಷಿತ ಹೆಬ್ಟಾಳವನ್ನಾಗಿಸುವ ಕನಸಿದ್ದು ಮತ್ತೂಮ್ಮೆ ಅವಕಾಶ ನೀಡುವಂತೆ ಕೋರಿದರು. ಬಿ-ಪ್ಯಾಕ್‌ ಸಂಸ್ಥೆಯ ನೀಡಿರುವ ಉತ್ತಮ ಆಡಳಿತ ನೀಡಿದ ಶಾಸಕರಲ್ಲಿ ನನಗೆ ಎರಡನೇ ಸ್ಥಾನದ ಮನ್ನಣೆ ನೀಡಿರುವುದು ಸಂತಸ ತಂದಿದೆ. ಕಳೆದ 6 ತಿಂಗಳಿನಿಂದ ನಾನು ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದೇನೆ. ಕ್ಷೇತ್ರದ ಬಹುಪಾಲು ಪ್ರದೇಶಗಳಿಗೆ ಮನೆ ಮನೆಗೂ ತೆರಳಿ ಪ್ರಚಾರ ನಡೆಸಿದ್ದೇನೆ. ಪ್ರಧಾನಿ ನರೇಂದ್ರಮೋದಿಯವರ ಪಾರದರ್ಶಕ ಆಡಳಿತದ ಕ್ಷೇತ್ರದ ಜನರು ಬಗ್ಗೆ ಹೆಚ್ಚು ಒಲವು ತೋರಿಸಿದ್ದಾರೆ. ಅಲ್ಲದೆ, ಈ ಹಿಂದೆ ಬಿ ಎಸ್‌ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಬೆಂಗಳೂರು ಅಭಿವೃದ್ದಿಗೆ ನೀಡಿದ ಕೊಡುಗೆಯನ್ನು ಜನರು ಮರೆತಿಲ್ಲ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next