Advertisement

ರಾಯಚೂರು ಪೊಲೀಸರ ವರ್ತನೆಗೆ ವಕೀಲರ ಖಂಡನೆ

11:24 AM Apr 27, 2019 | Team Udayavani |

ಹುಬ್ಬಳ್ಳಿ: ರಾಯಚೂರಿನಲ್ಲಿ ನ್ಯಾಯವಾದಿಯೊಬ್ಬರ ಅಂಗಿ ಬಿಚ್ಚಿಸಿ ಕೈಕೊಳ ತೊಡಿಸಿ ಪೊಲೀಸರು ಅಟ್ಟಹಾಸ ಮೆರೆದಿದ್ದನ್ನು ಖಂಡಿಸಿ ಕರ್ನಾಟಕ ರಾಜ್ಯ ಯುವ ವಕೀಲರ ಸಂಘದ ವತಿಯಿಂದ ತಹಶೀಲ್ದಾರ್‌ ಮೂಲಕ ಗೃಹ ಸಚಿವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

Advertisement

ಊಟದ ಪಾರ್ಸಲ್ ತೆಗೆದುಕೊಂಡು ಹೋಗುತ್ತಿದ್ದ ಅಂಗವಿಕಲ ವಕೀಲ ವೀರಯ್ಯಸ್ವಾಮಿ ಎಂಬುವವರನ್ನು ರಾಯಚೂರು ಪಶ್ಚಿಮ ಠಾಣೆಯ ಪೊಲೀಸ್‌ ಅಧಿಕಾರಿ ಬಲವಂತವಾಗಿ ಠಾಣೆಗೆ ಕರೆತಂದು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಹಲ್ಲೆ ನಡೆಸಿದ ಪೊಲೀಸ್‌ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಅಶೋಕ ಅಣವೇಕರ, ಶಿವಾನಂದ ವಡ್ಡಟ್ಟಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next