Advertisement

ದುರ್ಬಳಕೆ ಕಾರಣಕ್ಕೆ ಕಾನೂನು ರದ್ದು ಸಲ್ಲ

09:10 AM Feb 07, 2018 | Team Udayavani |

ಹೊಸದಿಲ್ಲಿ:”ದುರುಪಯೋಗ ಆಗುತ್ತದೆ ಎಂಬ ಮಾತ್ರಕ್ಕೆ ಕಾನೂನನ್ನು ರದ್ದುಗೊಳಿಸಲು ಸಾಧ್ಯವಿಲ್ಲ’ ಎಂದು ಸುಪ್ರೀಂಕೋರ್ಟ್‌ ಮಂಗಳವಾರ ಅಭಿಪ್ರಾಯಪಟ್ಟಿದೆ. ಆಧಾರ್‌ ಮಾಹಿತಿ ಸೋರಿಕೆ ಕುರಿತ ಮೇಲ್ಮನವಿ ವಿಚಾರಣೆಯಲ್ಲಿ ಇಂಥ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ಅರ್ಜಿದಾರರ ಪರವಾದ ಮಂಡಿಸಿದ ಮಾಜಿ ಸಚಿವ ಕಪಿಲ್‌ ಸಿಬಲ್‌,”ಸರ್ಕಾರಿ ಯೋಜನೆಗಳಿಗೆ ಹಾಗೂ ವಿವಿಧ ಸವಲತ್ತುಗಳಿಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸುವುದರಿಂದ ನಾಗರಿಕರ ಖಾಸಗಿ ಮಾಹಿತಿಯ ಗೋಪ್ಯತೆಗೆ ಚ್ಯುತಿ ಬರುತ್ತದೆ’ ಎಂದರು. ಆದರೆ, ಕಪಿಲ್‌ ವಾದವನ್ನು ನ್ಯಾಯಪೀಠ ಒಪ್ಪಲಿಲ್ಲ. ನ್ಯಾ| ಚಂದ್ರಚೂಡ್‌, “ದುರುಪಯೋಗ ಆಗುತ್ತದೆ ಎಂಬ ಕಾರಣಕ್ಕಾಗಿ ಕಾನೂನನ್ನು ಅಸಾಂವಿಧಾನಿಕ ಎಂದು ಕರೆಯುವ ಹಾಗಿಲ್ಲ. ಅದೇ ಕಾರಣಕ್ಕಾಗಿ ಅಂಥ ಕಾನೂನನ್ನು ರದ್ದುಗೊಳಿಸಲೂ ಆಗದು’ ಎಂದರು.

ಏತನ್ಮಧ್ಯೆ, ಆಧಾರ್‌ “ಸ್ಮಾರ್ಟ್‌ ಕಾರ್ಡ್‌’ ಮಾಡಿಸಿಕೊಡುತ್ತೇವೆ ಎನ್ನುವವರ ಬಗ್ಗೆ ಎಚ್ಚರವಿರಲಿ ಎಂದು ಆಧಾರ್‌ ಪ್ರಾಧಿಕಾರ ನಾಗರಿಕರಿಗೆ ಹೇಳಿದೆ.  ಪೇಪರ್‌ ಪ್ರಿಂಟ್‌ಗೆ ಲ್ಯಾಮಿನೇಟ್‌ ಕೂಡ ಬೇಕಾಗಿಲ್ಲ ಎಂದೂ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next