Advertisement

ಜಮೀನು ಪರಭಾರೆ ತೀರ್ಮಾನ ಬಿಜೆಪಿಯವರದ್ದು: ಶಾಮನೂರು

07:20 AM Jun 19, 2019 | Team Udayavani |

ದಾವಣಗೆರೆ: “ಜಿಂದಾಲ್‌ಗೆ ಭೂಮಿ ಪರಭಾರೆಗೆ ಸಂಬಂಧಿಸಿ ಸರಕಾರ ಸಚಿವ ಸಂಪುಟ ಉಪಸಮಿತಿ ರಚಿಸಿದೆ. ಈ ಸಮಿತಿ ಒಳ್ಳೆಯ ತೀರ್ಮಾನ ಕೈಗೊಳ್ಳುವ ವಿಶ್ವಾಸವಿದೆ’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

Advertisement

ಜಮೀನು ಕೊಡುವುದಕ್ಕೆ ಕಾಂಗ್ರೆಸ್‌ನವರೇ ವಿರೋಧ ಮಾಡುತ್ತಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದೆಲ್ಲಾ ಆಗಿರುವುದು ಬಿಜೆಪಿಯವರ ಕಾಲದಲ್ಲಿ. ಜಿಂದಾಲ್‌ಗೆ ಜಮೀನು ಕೊಡಬೇಕು ಎಂಬುದನ್ನು ತೀರ್ಮಾನ ಮಾಡಿದ್ದು ಕಾಂಗ್ರೆಸ್‌-ಜೆಡಿಎಸ್‌ನವರಲ್ಲ ಎಂದರು.

ವೀರಶೈವ, ಲಿಂಗಾಯತ ಒಂದೇ ಎಂದು ಹಿಂದೆಯೂ ಹೇಳಿದ್ದೇನೆ. ಈಗಲೂ ಹೇಳುತ್ತೇನೆ. ಯಾರಿಗೆ ಎಲ್ಲಿ ನ್ಯಾಯ ಸಿಗುತ್ತದೆಯೋ ಅಲ್ಲಿಗೇ ಹೋಗಲಿ. ಬೇಡ ಅನ್ನುವವರು ಯಾರೂ ಇಲ್ಲ. ನಾವು ಈಗಲೂ ವೀರಶೈವ-ಲಿಂಗಾಯತ ಒಂದೇ ಎಂದು ಹೇಳುತ್ತೇವೆ.
-ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್‌ ಹಿರಿಯ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next