Advertisement

ಅಧಿಕಾರ ಬಳಕೆಗೆ ಮಾಹಿತಿ ಕೊರತೆ ಅಡ್ಡಿ

01:07 PM Apr 17, 2017 | Team Udayavani |

ದಾವಣಗೆರೆ: ಅನೇಕ ಸಮಸ್ಯೆಗಳಿಗೆ ಕಂದಾಯ, ಪೊಲೀಸ್‌ ಇಲಾಖೆ ಅಧಿಕಾರಿಗಳು ತಮ್ಮಲ್ಲಿರುವ ಭದ್ರತಾ ಕಲಂನ ಅಧಿಕಾರ ಬಳಸಿಕೊಂಡು ಪರಿಹಾರ ಕಂಡುಕೊಳ್ಳಬಹುದಾಗಿದ್ದರೂ ಮಾಹಿತಿ ಕೊರತೆಯಿಂದ ಅಧಿಕಾರ ಬಳಕೆಯಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಹೇಳಿದ್ದಾರೆ. 

Advertisement

ಜಿಎಂ ಹಾಲಮ್ಮ ಪಿಯು ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಪೊಲೀಸ್‌, ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಭದ¤ರಾ ಕಲಂ, ಗಡಿಪಾರು ಪ್ರಕ್ರಿಯೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಆಡಳಿತ ಯಂತ್ರದ ಪ್ರಮುಖ ಇಲಾಖೆಗಳಾದ ಕಂದಾಯ, ಪೊಲೀಸ್‌ ಇಲಾಖೆ ಅಧಿಕಾರಿಗಳಿಗೆ ಕಾನೂನಿನಲ್ಲಿ ಕೆಲ ಉತ್ತಮ ಅವಕಾಶ ಇವೆ.

ಸಮಸ್ಯೆಗೆ ತಮ್ಮ ಹಂತದಲ್ಲೇ ಸೂಕ್ತ ಪರಿಹಾರ ಕಂಡುಕೊಳ್ಳಲು ಭದ್ರತಾ ಕಲಂನಲ್ಲಿ ಅಧಿಕಾರ ನೀಡಲಾಗಿದೆ. ಆದರೆ, ತಮಗೆ ಇರುವ ಅಧಿಕಾರ ಕುರಿತು ಅಧಿಕಾರಿಗಳಿಗೆ ಮಾಹಿತಿ ಕೊರತೆ ಇರುವುದರಿಂದ ಈ ಅಧಿಕಾರ ಬಳಕೆಯಾಗುತ್ತಿಲ್ಲ ಎಂದರು. ಯಾವುದೇ ಅಧಿಕಾರಿ ಆಗಿರಲಿ, ತನಗೆ ಇರುವ ಅಧಿಕಾರ, ಕರ್ತವ್ಯ ಕುರಿತು ಸಂಪೂರ್ಣ ಮಾಹಿತಿ ಇರಬೇಕು.

ಕಾನೂನು, ಕಟ್ಟಳೆಗಳನ್ನು ರೂಪಿಸಿದರೆ ಸಾಲದು. ಅವನ್ನು ಬಳಕೆಮಾಡಿಕೊಳ್ಳಬೇಕು. ಅದರಲ್ಲೂ ಸಾರ್ವಜನಿಕರೊಂದಿಗೆ ನಿರಂತರ ಒಡನಾಟ ಹೊಂದಿರುವವರು, ಅವರ ಏಳಿಗೆಗಾಗಿ ದುಡಿಯುವ ಕರ್ತವ್ಯದ ಹೊಣೆ ಹೊತ್ತವರು ಇಂತಹ ಕಾನೂನು ಕುರಿತು ಆಳ ಜ್ಞಾನ ಹೊಂದಿರಬೇಕು. ಕಾನೂನು ಅರಿವಿಲ್ಲದೇ ಇದ್ದರೆ ಅಂತಹ ಅಧಿಕಾರಿ ಜನಪರವಾಗಿ ಕೆಲಸಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು. 

ಅಧಿಕಾರಿಗಳು ಕಾನೂನಿನ ಬಗ್ಗೆ ಸೂಕ್ತ ಮಾಹಿತಿ, ಅರಿವು ಹೊಂದಬೇಕು. ಅರಿವಿಲ್ಲದಿದ್ದರೆ ಸಾಕಷ್ಟು ಪ್ರಕರಣಗಳಲ್ಲಿ ಅಧಿಧಿಕಾರವಿದ್ದರೂ ಬಳಸಲು ಸಾಧ್ಯವಾಗದು. ಅಧಿಕಾರದ ಬಳಕೆಯಾಗದೇ ಹೋದಾಗ ನ್ಯಾಯಯುತ ತೀರ್ಮಾನ ಕೈಗೊಳ್ಳುವುದು ತತ್‌ಕ್ಷಣಕ್ಕೆ ಸಾಧ್ಯವಾಗವುದಿಲ್ಲ. ಇಂತಹ ಸಂದರ್ಭಗಳಲ್ಲಿ ಸಮಾಜದ ಶಾಂತಿ ಭಂಗ ತರಲು ಬಯಸುವವರು ಕ್ರಿಯಾಶೀಲರಾಗಬಹುದಾದ ಅಪಾಯ ಇರುತ್ತದೆ ಎಂದು ತಿಳಿಸಿದರು. 

Advertisement

ಕಂದಾಯ, ಪೊಲೀಸ್‌ ಎರಡೂ ಇಲಾಖೆಗಳಿಗೂ ಸಮನ್ವಯತೆ, ಸೌಹಾರ್ದತೆ ಅತ್ಯಗತ್ಯವಾಗಿದೆ. ಉಭಯ ಇಲಾಖೆ ಅಧಿಧಿಕಾರಿಗಳಿಗೆ ಇಂತಹ ಕಾನೂನು ಬಗ್ಗೆ ಅರಿವು, ಜಾಗೃತಿ ಮೂಡಿಸಲು ಈ ಕಾರ್ಯಾಗಾರ ನಡೆಸಲಾಗುತ್ತಿದೆ. ಈ ಕಾರ್ಯಾಗಾರದಿಂದ ಕಾನೂನು, ಸೌಹಾರ್ದತೆ ಕಾಪಾಡುವ ಹಾದಿಯೂ ಸುಗಮವಾಗುತ್ತದೆ. 

ಕಾನೂನಿನಲ್ಲಿರುವ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಲು ಸಹ ಇದು ಸಹಕಾರಿಯಾಗುತ್ತದೆ ಎಂದು ಹೇಳಿದರು. ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌ ಮಾತನಾಡಿ, ಇಂದು ಸಮಾಜ ಸಾಕಷ್ಟು ಸುಧಾರಣೆ ಕಾಣುತ್ತಿದೆ. ಅದರೊಟ್ಟಿಗೆ ಸಮಸ್ಯೆಗಳೂ ಸಹ ಜಟಿಲಗೊಳ್ಳುತ್ತಿವೆ.

ಅಧಿಕಾರಿ, ಸಿಬ್ಬಂದಿ ಇದರಿಂದ ಸಹಜವಾಗಿಯೇ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಚಿಕ್ಕಪುಟ್ಟ ವಿಷಯಗಳೂ ಸಹಿತ ದೊಡ್ಡ ಸಮಸ್ಯೆಯಾಗಿ ಗೋಚರಿಸುವಂತಹ ಸ್ಥಿತಿ ಬಂದಿದೆ. ಇದು ಸಿಬ್ಬಂದಿ ಮೇಲೆ ಇನ್ನಷ್ಟು ಒತ್ತಡ ಸೃಷ್ಟಿಸುತ್ತಿದೆ ಎಂದರು. ಹಿರಿಯ ಅಧಿಕಾರಿಗಳು ತಮ್ಮ ಅಧಿಕಾರದ ಸಂಪೂರ್ಣ ಮಾಹಿತಿ, ಅರಿವು ಹೊಂದಿರಬೇಕು. ಸಿಬ್ಬಂದಿಗೆ ಸಮಸ್ಯೆಯಾಗದಂತೆ ಕಾನೂನು ಅನುಷ್ಠಾನಗೊಳಿಸುವ ಮಾರ್ಗದರ್ಶನ ನೀಡಬೇಕು. 

ಆದರೆ, ಬಹುತೇಕ ಅಧಿಕಾರಿಗಳು ಕೆಲ ಸಂದರ್ಭದಲ್ಲಿ ತಮಗೆ ಇರುವ ಅಧಿಧಿಕಾರದ ಪರಿಮಿತಿ ತಿಳಿಯದೆ ಪ್ರಕರಣ ಬಿದ್ದು ಹೋಗಿವೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಹೆಚ್ಚುವರಿ ಪೊಲೀಸ್‌ ಅಧಿಧೀಕ್ಷಕಿ ಯಶೋಧ ವಂಟಿಗೋಡಿ, ಇಲಾಖೆ ಅಧಿಕಾರಿ, ಸಿಬ್ಬಂದಿ ಕಾರ್ಯಾಗಾರದಲ್ಲಿ ಭಾಗಿಯಾದರು.  

Advertisement

Udayavani is now on Telegram. Click here to join our channel and stay updated with the latest news.

Next