Advertisement

ಶ್ರದ್ಧಾ ಭಕ್ತಿಯ ಕುಕ್ವಾಡೇಶ್ವರಿ ಜಾತ್ರೆ

07:00 PM Jan 20, 2021 | Team Udayavani |

ಹೊಳಲ್ಕೆರೆ: ಪಟ್ಟಣದ ಅಧಿದೇವತೆ ಶ್ರೀ ಕುಕ್ವಾಡೇಶ್ವರಿದೇವಿ ಜಾತ್ರೆ ಹಾಗೂ ಹೊರಬೀಡು ಉತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು. ಸೋಮವಾರ ರಾತ್ರಿ ಬೀರಲಿಂಗೇಶ್ವರಸ್ವಾಮಿ ಹೂವಿನ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ನಾಡಿನ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ರಾಜಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು.

Advertisement

ಇದನ್ನೂ ಓದಿ:ಗುಜರಿ ವಸ್ತುಗಳನ್ನು ಬಳಸಿ ವಾಹನವನ್ನು ತಯಾರಿಸಿದ ಉಡುಪಿಯ ಯುವಕ

ಮಂಗಳವಾರ ಬೆಳಿಗ್ಗೆ ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ಕುಕ್ವಾಡೇಶ್ವರಿ ದೇವಿ ದೇವಸ್ಥಾನಕ್ಕೆ ಹೊರಬೀಡಿಗೆ ಕಾರ್ಯಕ್ರಮ ನಡೆಯಿತು. ಹೊರಬೀಡಿಗೆ ಬೇಕಾದ ದವಸ ಧಾನ್ಯ, ಹಣ್ಣು, ಹೂವು, ಕುರಿ, ಕೋಳಿ ಸೇರಿದಂತೆ ವಿವಿಧ ಹರಕೆ ಕಾಣಿಕೆಗಳನ್ನು ಹೊತ್ತ ಅಲಂಕೃತ ಎತ್ತಿನಗಾಡಿಗಳು ನೋಡುಗರ ಕಣ್ಮನ ಸೆಳೆದವು. ಶಾಸಕ ಎಂ. ಚಂದ್ರಪ್ಪ ಶ್ರೀ ಕುಕ್ವಾಡೇಶ್ವರಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next