Advertisement

ಜನತಾ ಕರ್ಫ್ಯೂ: ರೈಲ್ವೆ ಪ್ರಯಾಣಿಕರ ಪರದಾಟ

12:59 PM Apr 29, 2021 | Team Udayavani |

ಬೆಂಗಳೂರು: ನಗರದ ಕನಕಪುರ ರಸ್ತೆಯಯಲ್ಲಿರುವ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿಕಾರ್ಯ ನಿರ್ವಹಿಸುವ ಪಶ್ಚಿಮ ಬಂಗಾಳದದಿಲೀಪ್‌ ರೈಲ್ವೆ ಸೀಟು ಬುಕಿಂಗ್‌ ಆಗಿರುವುದು ಬುಧ‌ವಾರ. ಆದರೆ, ಅವರು ಮಂಗಳವಾರರಾತ್ರಿಯೇ ಮೆಜೆಸ್ಟಿಕ್‌ನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ!

Advertisement

ಇದು ಕರ್ಫ್ಯೂ ಬಿಗಿಗೊಳಿಸಿದ್ದರ ಎಫೆಕ್ಟ್.ಇದೊಂದು ಸ್ಯಾಂಪಲ್‌ ಅಷ್ಟೇ. ನಗರದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಇಂತಹ ಹತ್ತಾರು ಉದಾಹರಣೆಗಳನ್ನು ನೀವು ಕಾಣಬಹುದು. ಬುಧವಾರಬೆಳಗಾದರೆ ಬಸ್‌, ಮೆಟ್ರೋ, ಟ್ಯಾಕ್ಸಿ, ಆಟೋ ಸೇವೆಗಳು ಇರುವುದಿಲ್ಲ ಎಂಬ ಕಾರಣಕ್ಕೆ ಜನ ಹಿಂದಿನದಿನವೇ ಕ್ಯಾಂಪ್‌ಗಳು, ಗುಡಿಸಲುಗಳನ್ನು ತೊರೆದು,ಕಾಲ್ನಡಿಗೆಯಲ್ಲಿ ನಿಲ್ದಾಣಗಳನ್ನು ಬಂದು ಸೇರಿದ್ದಾರೆ.ಗಂಟೆಗಟ್ಟಲೆ ರೈಲಿಗಾಗಿ ಕಾದು, ಪ್ರಯಾಣಬೆಳೆಸಿದರು.

ಜನ ಬೆಂಗಳೂರಿನಿಂದ ನೂರಾರುಕಿ.ಮೀ. ದೂರ ದಲ್ಲಿರುವ ಊರುಗಳನ್ನುತಲುಪಲು ಅಷ್ಟು ಸಮಸ್ಯೆ ಆಗಲಿಲ್ಲ. ಆದರೆ,ನಗರದಲ್ಲಿ ಅಗತ್ಯ ಕೆಲಸ ಗಳಿಗೆ ತೆರಳಲು ಮಾತ್ರಇನ್ನಿಲ್ಲದ ಕಸರತ್ತು ಮಾಡಬೇಕಾಯಿತು.ಸ್ವಂತ ವಾಹನಗಳಿದ್ದವರು ಅನಾಯಾಸವಾಗಿಹೋಗಿ ಕೆಲಸ ಮುಗಿಸಿಕೊಂಡು ಹಿಂತಿರುಗಿದರು.

ತುರ್ತು ಸೇವೆಗಳಿದ್ದವರಿಗೂ ಬಸ್‌ಗಳ ವ್ಯವಸ್ಥೆ ಇತ್ತು.ಆದರೆ, ಊರುಗಳಿಗೆ ಹೋಗುವವರು, ಕೆಲಸ ನಿಮಿತ್ತಒಂದು ಕಡೆಯಿಂದ ಮತ್ತೂಂದು ಕಡೆಗೆ ತೆರಳುವಸ್ವಂತ ವಾಹನಗಳಿಲ್ಲದವರು ಗಂಟೆ ಗಟ್ಟಲೆ ಆಟೋ-ಟ್ಯಾಕ್ಸಿಗಳಿಗಾಗಿ ಕಾಯಬೇಕಾ ಯಿತು. ಲಭ್ಯವಿದ್ದರೂಹೆಚ್ಚು ಹಣ ತೆರಬೇಕಾಯಿತು.

ಸಮೀಪದ ರೈಲು ನಿಲ್ದಾಣಕ್ಕೆ ಹೋಗಲು ಆಟೋಅಥವಾ ಟ್ಯಾಕ್ಸಿಗಳನ್ನು ಹಿಡಿದು ಹೋಗಬಹುದು.ಟಿಕೆಟ್‌ ಮತ್ತು ಪ್ರಯಾಣಿಕರ ಗುರುತಿನಚೀಟಿಯೂಇರುತ್ತಿತ್ತು. ಆದರೆ, ಪ್ರಯಾಣಿಕರನ್ನು ಬಿಟ್ಟುವಾಪಸ್ಸಾಗುವಾಗ ಯಾವುದೇ ಅಗತ್ಯ ದಾಖಲೆಗಳುಇಲ್ಲದೆ, ಚಾಲಕರು ಪೇಚೆಗೆ ಸಿಲುಕುತ್ತಿದ್ದುದುಕಂಡುಬಂತು. ಬೆಳಗ್ಗೆಯೇ ಇಂತಹ ಘಟನೆಗಳುವರದಿಯಾದ ನಂತರದಲ್ಲಿ ಆಟೋ-ಟ್ಯಾಕ್ಸಿಗಳಸಂಚಾರ ಕೂಡ ಕಡಿಮೆಯಾಯಿತು.

Advertisement

ಆನ್‌ಲೈನ್‌ ಪೋರ್ಟಲ್‌ಗೆ ಆಗ್ರಹ: ಸೇವೆನೀಡಲು ಯಾವುದೇ ಸಮಸ್ಯೆ ಇಲ್ಲ. ಆದರೆ,ಪ್ರಯಾಣಿಕರು ನಿಲ್ದಾಣಕ್ಕೋ ಅಥವಾ ರೋಗಿಗಳನ್ನು ನೋಡಿಕೊಳ್ಳುವವರನ್ನು ಆಸ್ಪತ್ರೆಗೋ ಬಿಟ್ಟುಬರಲು ಹೋದರೆ, ವಾಪಸ್‌ ಬರುವಾಗಯಾವುದೇ ದಾಖಲೆಗಳು ಚಾಲಕರ ಬಳಿ ಇರುವುದಿಲ್ಲ.

ಆಗ, ಪೊಲೀಸರು ಕಿರಿಕಿರಿ ಮಾಡುತ್ತಾರೆ.ಇದು ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಹೊರಡಿಸಿರುವ ಮಾರ್ಗಸೂಚಿ ಸಮರ್ಪಕವಾಗಿಲ್ಲ ಅನಿಸುತ್ತದೆ. ಕೊನೆಪಕ್ಷ ಕಳೆದ ಬಾರಿ ಲಾಕ್‌ಡೌನ್‌ ಸಂದರ್ಭದಲ್ಲಿ ಇದ್ದಂತೆ ಆನ್‌ಲೈನ್‌ಪೋರ್ಟಲ್‌ ವ್ಯವಸ್ಥೆಯನ್ನಾದರೂ ಮಾಡಿದರೆಉತ್ತಮ ಎಂದು ರಾಜ್ಯ ಪ್ರವಾಸಿ ವಾಹನಗಳಮಾಲಿಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳಒತ್ತಾಯಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next