Advertisement

ಜಮ್ಮು-ಕಾಶ್ಮೀರ ವಿಚಾರ ಏನೂ ಮಾತನಾಡಲ್ಲ

12:08 AM Aug 07, 2019 | Team Udayavani |

ಬೆಂಗಳೂರು: ಜಮ್ಮು -ಕಾಶ್ಮೀರದಲ್ಲಿ 370 ನೇ ವಿಧಿ ವಾಪಸ್‌ ತೆಗೆದುಕೊಂಡಿರುವ ವಿಚಾರದಲ್ಲಿ ನಾನು ಏನೂ ಮಾತನಾಡಲು ಹೋಗುವುದಿಲ್ಲ. ಏನಾದ್ರೂ ಹೇಳಿ ಪಕ್ಷಕ್ಕೆ ತೊಂದರೆಯಾಗು ವಂತೆ ಮಾಡಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಐದು ಸಲ ನಾನು ಕಾಶ್ಮೀರಕ್ಕೆ ಹೋಗಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದೆ.

Advertisement

ಯಾವುದೇ ಗಲಾಟೆಗೆ ಆಸ್ಪದ ಕೊಡದೆ ಅಭಿವೃದ್ಧಿಗೆ ಒತ್ತು ನೀಡಿದ್ದೆ, ಸಂಸತ್‌ನಲ್ಲೂ ಅದನ್ನು ಮಾತನಾಡಿದ್ದೆ. ಕ್ಲೀನ್‌ ಕಾಶ್ಮೀರ್‌, ಕ್ಲೀನ್‌ ಇಂಡಿಯಾ ಮಾಡ್ತೀವಿ ಅಂತಾ ಗೃಹ ಸಚಿವರು ಹೇಳಿದ್ದಾರೆ. ನಾನೂ ಐದು ವರ್ಷ ಇರ್ತೀನಿ ಅನ್ನೋ ಭಾವನೆ. ಏನ್‌ ಮಾಡ್ತಾರೋ ಅನ್ನೋದನ್ನಾ ಕಾದು ನೋಡೋಣ ಎಂದು ತಿಳಿಸಿದರು.

ಎಚ್‌ಡಿಕೆ ಪ್ರವಾಸ: ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಿದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆ ಭಾಗದಲ್ಲಿ ಪ್ರವಾಸ ಕೈಗೊಳ್ಳುತ್ತಾರೆ. ವೈಮಾನಿಕ ಸಮೀಕ್ಷೆ ಮಾಡಲು ಸೂಚಿಸಿದ್ದೇನೆ. ನಾನು ಆಲ್ಲಿಗೆ ಹೋಗಿ ಬಂದರೆ ಅಸೆಂಬ್ಲಿಯಲ್ಲಿ ಮಾತನಾಡಲು ಆಗುವುದಿಲ್ಲ. ಹೀಗಾಗಿ, ಕುಮಾರಸ್ವಾಮಿಗೆ ಹೋಗಲು ಸೂಚಿಸಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next