Advertisement

ಪಟಾಕಿ ನಿಷೇಧ ಮೊದಲೇ ನಿರ್ಧರಿಸಬೇಕಿತ್ತು

12:49 AM Nov 07, 2020 | mahesh |

ಈ ದೀಪಾವಳಿಯಲ್ಲಿ ಪಟಾಕಿ ಬಳಸದಂತೆ ಸೂಚಿಸಿದ ರಾಜ್ಯಗಳ ಸಾಲಿಗೆ ಕರ್ನಾಟಕವೂ ಸೇರಿದೆ. ರಾಜಸ್ಥಾನ, ದಿಲ್ಲಿ, ಸಿಕ್ಕಿಂ, ಒಡಿಶಾ, ಚಂಡೀಗಢ, ಪಶ್ಚಿಮ ಬಂಗಾಲದಲ್ಲಿ ಈಗಾಗಲೇ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಮುಂಬಯಿ ನಗರ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಬಳಕೆಯನ್ನು ನಿಷೇಧಿಸಿದೆ. ಕರ್ನಾಟಕ, ತಮಿಳುನಾಡು, ಪಂಜಾಬ್‌, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಪಟಾಕಿ ಯಾಕೆ ನಿಷೇಧಿಸಬಾರದು ಎಂದು ಪ್ರಶ್ನಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ವಿವರಣೆ ಕೋರಿ ನೋಟಿಸ್‌ ಜಾರಿಗೊಳಿಸಿದೆ. ದಿಲ್ಲಿ ಮತ್ತು ಸುತ್ತಲಿನ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಯು ಮಾಲಿನ್ಯ ತಡೆಯುವಲ್ಲಿ ಪಟಾಕಿ ನಿಷೇಧ ಸಹಕಾರಿ ಯಾದೀತೆಂಬುದು ಪೀಠದ ಲೆಕ್ಕಾಚಾರ. ನ. 9 ರಂದು ತನ್ನ ತೀರ್ಮಾನವನ್ನು ಪ್ರಕಟಿಸುವ ಸಾಧ್ಯತೆ ಇದೆ.

Advertisement

ರಾಜ್ಯ ಸರಕಾರದ ನಿರ್ಧಾರಕ್ಕೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಪಟಾಕಿಯನ್ನು ನಿಷೇಧಿಸುವುದಾದರೆ ಸಂಪೂರ್ಣ ನಿಷೇಧಿಸಿ. ದೀಪಾವಳಿಗೆ ಮಾತ್ರ ನಿಷೇಧಿಸುವುದರಿಂದ ದೀಪಾವಳಿಯನ್ನು ಆಚರಿಸುವ ಹಿಂದೂ ಸಮುದಾಯಕ್ಕೆ ಬೇಸರವಾಗುತ್ತದೆ ಎಂದೂ ಹೇಳಿವೆ. ಆದರೆ ರಾಜ್ಯ ಸರಕಾರ ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವ ಸಲುವಾಗಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ಮಾಲಿನ್ಯ ಹಾಗೂ ಕೊರೊನಾ ಸೋಂಕು ತಡೆಯುವಲ್ಲಿ ಸರಕಾರದ ನಿರ್ಧಾರ ಸಮರ್ಥನೀಯವಾಗಿದ್ದರೂ ಪಟಾಕಿ ಆಶ್ರಯಿತ ಪರೋಕ್ಷ ಉದ್ಯಮವನ್ನು ಗೊಂದಲಕ್ಕೆ ಸಿಲುಕಿಸಿರುವುದು ಸ್ಪಷ್ಟ.

ಪಟಾಕಿ ನಿಷೇಧ ಸರಿಯೇ ಅಥವಾ ತಪ್ಪೇ ಎನ್ನುವುದರ ಕುರಿತು ಸದ್ಯ ಚರ್ಚೆ ಆರಂಭವಾಗಿದೆ. ನಿಜವಾದ ಚರ್ಚೆ ನಡೆಯಬೇಕಾದದ್ದು ಸರಕಾರದ ದಿಢೀರ್‌ ನಿರ್ಧಾರದ ಬಗ್ಗೆ. ಹಬ್ಬಕ್ಕೆ ಕೇವಲ ಹತ್ತು ದಿನಗಳಿರುವಾಗ ಇಂಥದೊಂದು ತೀರ್ಮಾನ ಪ್ರಕಟಿಸಿದರೆ ಇದನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಶ್ರಯಿಸಿರು ವವರಿಗೆ ಬೀಳುವ ಹೊಡೆತ ಸಣ್ಣದಲ್ಲ.

ವಿಶ್ವದಲ್ಲೇ ಅತೀ ಹೆಚ್ಚು ಪಟಾಕಿಯನ್ನು ತಯಾರಿಸುವ ಎರಡನೇ ದೇಶ ಭಾರತ. ತಮಿಳುನಾಡಿನ ಶಿವಕಾಶಿ ಹಾಗೂ ವಿರುಧ್‌ ನಗರದಲ್ಲಿ ದೇಶಕ್ಕೆ ಬೇಕಾದ ಶೇ. 80 ರಷ್ಟು ಪಟಾಕಿಗಳನ್ನು ತಯಾರಿಸಲಾಗುತ್ತಿದೆ. ವಾರ್ಷಿಕ 3 ರಿಂದ 6 ಸಾವಿರ ಕೋಟಿ ರೂ. ಗಳ ವಹಿವಾಟು ನಡೆಯುತ್ತದೆ. ಸುಮಾರು ಐದು ಲಕ್ಷ ಕುಟುಂಬಗಳು ಈ ಉದ್ದಿಮೆಯನ್ನು ನೇರವಾಗಿ ಹಾಗೂ ಪರೋಕ್ಷವಾಗಿ ನಂಬಿ ಕುಳಿತಿವೆ. ಕೆಲವು ವರ್ಷಗಳಿಂದೀಚೆಗೆ ಪಟಾಕಿ ಉದ್ದಿಮೆ ಸಾಕಷ್ಟು ನಷ್ಟ ಅನುಭವಿಸಿತ್ತು. ಚೀನದಿಂದ ಆಮದಾಗುತ್ತಿದ್ದ ಪಟಾಕಿಗಳೂ ಇದಕ್ಕೆ ಕಾರಣವಾಗಿದ್ದವು. ಈ ವರ್ಷ ಚೀನ ಪಟಾಕಿ ಆಮದು ಮಾಡಿಸಿಕೊಳ್ಳುವಂತಿಲ್ಲ. ಹಾಗಾಗಿ ದೇಶಿ ಪಟಾಕಿ ಉದ್ಯಮದಲ್ಲಿ ಹೊಸ ನಿರೀಕ್ಷೆ ಹುಟ್ಟಿತ್ತು. ಕೈಗಾರಿಕೆಯ ಕಷ್ಟ ಇದಾದರೆ, ಹಬ್ಬಕ್ಕೆಂದು ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಸಾವಿರಾರು ಮಂದಿ ವ್ಯಾಪಾರಸ್ಥರು ಈಗಾಗಲೇ ಮುಂಗಡ ಹಣ ನೀಡಿ ಪಟಾಕಿ ಕಾದಿರಿಸಿದ್ದಾರೆ. ಒಂದೆರಡು ದಿನಗಳಲ್ಲಿ ಪಟಾಕಿಯನ್ನು ಸ್ವೀಕರಿಸಬೇಕು ಎನ್ನುತ್ತಿರುವಾಗ ರಾಜ್ಯ ಸರಕಾರ ದಿಢೀರ್‌ ನಿಷೇಧಿಸಿರುವುದು ಈ ವ್ಯಾಪಾರಸ್ಥರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹಲವು ಉದ್ಯಮಗಳು ನೇರವಾಗಿ ನಮ್ಮ ರಾಜ್ಯಕ್ಕೆ ಸಂಬಂಧಿಸಿ ರುವುದಿಲ್ಲ, ಆದರೆ ಅವುಗಳ ಗ್ರಾಹಕರು ಇರುತ್ತಾರೆ. ಪರೋಕ್ಷ ಉದ್ಯಮಗಳು (ವ್ಯಾಪಾ ರಸ್ಥರು ಇತ್ಯಾದಿ) ಇವರನ್ನು ಆಶ್ರಯಿಸಿರುತ್ತಾರೆ. ಇವರೆಲ್ಲರೂ ಸ್ಥಳೀಯ ಆರ್ಥಿ ಕತೆಯ ಕೊಂಡಿಗಳು. ಇವುಗಳ ಮೇಲಾಗುವ ಪರಿಣಾಮವನ್ನೂ ಗಮನ ದಲ್ಲಿಟ್ಟು ಕೊಂಡು ಸಾಕಷ್ಟು ಮೊದಲೇ ಸರಕಾರ ಇಂಥ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕಾದುದು ಅಗತ್ಯ. ಆಗ ಸ್ಥಳೀಯ ಉದ್ಯಮ, ಉದ್ಯಮಿಗಳಿಗೆ ಆಗುವ ನಷ್ಟವನ್ನು ತಡೆಯಬಹುದು. ಅದೂ ಆಡಳಿತ ನಡೆಸುವವರ ಆದ್ಯ ಕರ್ತವ್ಯ.

ಈ ದೀಪಾವಳಿಯಲ್ಲಿ ಪಟಾಕಿ ಬಳಸದಂತೆ ಸೂಚಿಸಿದ ರಾಜ್ಯಗಳ ಸಾಲಿಗೆ ಕರ್ನಾಟಕವೂ ಸೇರಿದೆ. ರಾಜಸ್ಥಾನ, ದಿಲ್ಲಿ, ಸಿಕ್ಕಿಂ, ಒಡಿಶಾ, ಚಂಡೀಗಢ, ಪಶ್ಚಿಮ ಬಂಗಾಲದಲ್ಲಿ ಈಗಾಗಲೇ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಮುಂಬಯಿ ನಗರ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಬಳಕೆ ಯನ್ನು ನಿಷೇಧಿಸಿದೆ. ಕರ್ನಾಟಕ, ತಮಿಳುನಾಡು, ಪಂಜಾಬ್‌, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಪಟಾಕಿ ಯಾಕೆ ನಿಷೇಧಿಸಬಾರದು ಎಂದು ಪ್ರಶ್ನಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ವಿವರಣೆ ಕೋರಿ ನೋಟಿಸ್‌ ಜಾರಿಗೊಳಿಸಿದೆ. ದಿಲ್ಲಿ ಮತ್ತು ಸುತ್ತಲಿನ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಯು ಮಾಲಿನ್ಯ ತಡೆಯುವಲ್ಲಿ ಪಟಾಕಿ ನಿಷೇಧ ಸಹಕಾರಿ ಯಾದೀತೆಂಬುದು ಪೀಠದ ಲೆಕ್ಕಾಚಾರ. ನ. 9 ರಂದು ತನ್ನ ತೀರ್ಮಾನವನ್ನು ಪ್ರಕಟಿಸುವ ಸಾಧ್ಯತೆ ಇದೆ.

Advertisement

ರಾಜ್ಯ ಸರಕಾರದ ನಿರ್ಧಾರಕ್ಕೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಪಟಾಕಿಯನ್ನು ನಿಷೇಧಿಸುವುದಾದರೆ ಸಂಪೂರ್ಣ ನಿಷೇಧಿಸಿ. ದೀಪಾವಳಿಗೆ ಮಾತ್ರ ನಿಷೇಧಿಸುವುದರಿಂದ ದೀಪಾವಳಿಯನ್ನು ಆಚರಿಸುವ ಹಿಂದೂ ಸಮುದಾಯಕ್ಕೆ ಬೇಸರವಾಗುತ್ತದೆ ಎಂದೂ ಹೇಳಿವೆ. ಆದರೆ ರಾಜ್ಯ ಸರಕಾರ ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವ ಸಲುವಾಗಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ಮಾಲಿನ್ಯ ಹಾಗೂ ಕೊರೊನಾ ಸೋಂಕು ತಡೆಯುವಲ್ಲಿ ಸರಕಾರದ ನಿರ್ಧಾರ ಸಮರ್ಥನೀಯವಾಗಿದ್ದರೂ ಪಟಾಕಿ ಆಶ್ರಯಿತ ಪರೋಕ್ಷ ಉದ್ಯಮವನ್ನು ಗೊಂದಲಕ್ಕೆ ಸಿಲುಕಿಸಿರುವುದು ಸ್ಪಷ್ಟ.

ಪಟಾಕಿ ನಿಷೇಧ ಸರಿಯೇ ಅಥವಾ ತಪ್ಪೇ ಎನ್ನುವುದರ ಕುರಿತು ಸದ್ಯ ಚರ್ಚೆ ಆರಂಭವಾಗಿದೆ. ನಿಜವಾದ ಚರ್ಚೆ ನಡೆಯಬೇಕಾದದ್ದು ಸರಕಾರದ ದಿಢೀರ್‌ ನಿರ್ಧಾರದ ಬಗ್ಗೆ. ಹಬ್ಬಕ್ಕೆ ಕೇವಲ ಹತ್ತು ದಿನಗಳಿರುವಾಗ ಇಂಥದೊಂದು ತೀರ್ಮಾನ ಪ್ರಕಟಿಸಿದರೆ ಇದನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಶ್ರಯಿಸಿರು ವವರಿಗೆ ಬೀಳುವ ಹೊಡೆತ ಸಣ್ಣದಲ್ಲ.

ವಿಶ್ವದಲ್ಲೇ ಅತೀ ಹೆಚ್ಚು ಪಟಾಕಿಯನ್ನು ತಯಾರಿಸುವ ಎರಡನೇ ದೇಶ ಭಾರತ. ತಮಿಳುನಾಡಿನ ಶಿವಕಾಶಿ ಹಾಗೂ ವಿರುಧ್‌ ನಗರದಲ್ಲಿ ದೇಶಕ್ಕೆ ಬೇಕಾದ ಶೇ. 80 ರಷ್ಟು ಪಟಾಕಿಗಳನ್ನು ತಯಾರಿಸಲಾಗುತ್ತಿದೆ. ವಾರ್ಷಿಕ 3 ರಿಂದ 6 ಸಾವಿರ ಕೋಟಿ ರೂ. ಗಳ ವಹಿವಾಟು ನಡೆಯುತ್ತದೆ. ಸುಮಾರು ಐದು ಲಕ್ಷ ಕುಟುಂಬಗಳು ಈ ಉದ್ದಿಮೆಯನ್ನು ನೇರವಾಗಿ ಹಾಗೂ ಪರೋಕ್ಷವಾಗಿ ನಂಬಿ ಕುಳಿತಿವೆ. ಕೆಲವು ವರ್ಷಗಳಿಂದೀಚೆಗೆ ಪಟಾಕಿ ಉದ್ದಿಮೆ ಸಾಕಷ್ಟು ನಷ್ಟ ಅನುಭವಿಸಿತ್ತು. ಚೀನದಿಂದ ಆಮದಾಗುತ್ತಿದ್ದ ಪಟಾಕಿಗಳೂ ಇದಕ್ಕೆ ಕಾರಣವಾಗಿದ್ದವು. ಈ ವರ್ಷ ಚೀನ ಪಟಾಕಿ ಆಮದು ಮಾಡಿಸಿಕೊಳ್ಳುವಂತಿಲ್ಲ. ಹಾಗಾಗಿ ದೇಶಿ ಪಟಾಕಿ ಉದ್ಯಮದಲ್ಲಿ ಹೊಸ ನಿರೀಕ್ಷೆ ಹುಟ್ಟಿತ್ತು. ಕೈಗಾರಿಕೆಯ ಕಷ್ಟ ಇದಾದರೆ, ಹಬ್ಬಕ್ಕೆಂದು ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಸಾವಿರಾರು ಮಂದಿ ವ್ಯಾಪಾರಸ್ಥರು ಈಗಾಗಲೇ ಮುಂಗಡ ಹಣ ನೀಡಿ ಪಟಾಕಿ ಕಾದಿರಿಸಿದ್ದಾರೆ. ಒಂದೆರಡು ದಿನಗಳಲ್ಲಿ ಪಟಾಕಿಯನ್ನು ಸ್ವೀಕರಿಸಬೇಕು ಎನ್ನುತ್ತಿರುವಾಗ ರಾಜ್ಯ ಸರಕಾರ ದಿಢೀರ್‌ ನಿಷೇಧಿಸಿರುವುದು ಈ ವ್ಯಾಪಾರಸ್ಥರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹಲವು ಉದ್ಯಮಗಳು ನೇರವಾಗಿ ನಮ್ಮ ರಾಜ್ಯಕ್ಕೆ ಸಂಬಂಧಿಸಿ ರುವುದಿಲ್ಲ, ಆದರೆ ಅವುಗಳ ಗ್ರಾಹಕರು ಇರುತ್ತಾರೆ. ಪರೋಕ್ಷ ಉದ್ಯಮಗಳು (ವ್ಯಾಪಾ ರಸ್ಥರು ಇತ್ಯಾದಿ) ಇವರನ್ನು ಆಶ್ರಯಿಸಿರುತ್ತಾರೆ. ಇವರೆಲ್ಲರೂ ಸ್ಥಳೀಯ ಆರ್ಥಿ ಕತೆಯ ಕೊಂಡಿಗಳು. ಇವುಗಳ ಮೇಲಾಗುವ ಪರಿಣಾಮವನ್ನೂ ಗಮನ ದಲ್ಲಿಟ್ಟು ಕೊಂಡು ಸಾಕಷ್ಟು ಮೊದಲೇ ಸರಕಾರ ಇಂಥ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕಾದುದು ಅಗತ್ಯ. ಆಗ ಸ್ಥಳೀಯ ಉದ್ಯಮ, ಉದ್ಯಮಿಗಳಿಗೆ ಆಗುವ ನಷ್ಟವನ್ನು ತಡೆಯಬಹುದು. ಅದೂ ಆಡಳಿತ ನಡೆಸುವವರ ಆದ್ಯ ಕರ್ತವ್ಯ.

Advertisement

Udayavani is now on Telegram. Click here to join our channel and stay updated with the latest news.

Next