Advertisement

ಕೋವಿಡ್ ವಿರುದ್ಧ ಹೋರಾಟ ಕೊಂಕಣ ವಿಭಾಗಕ್ಕೆ 109 ಕೋ. ರೂ. ನಿಧಿ

09:54 AM Jun 18, 2020 | mahesh |

ಥಾಣೆ: ಮಹಾರಾಷ್ಟ್ರ ಸರಕಾರವು ರಾಜ್ಯದ ಕೊಂಕಣ ವಿಭಾಗಕ್ಕೆ ಕೋವಿಡ್ ವಿರುದ್ಧ ಹೋರಾಡಲು 109 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಈ ಪೈಕಿ 35 ಕೋಟಿ ರೂ.ಗಳನ್ನು ಥಾಣೆ ಜಿಲ್ಲೆಗೆ ಬಳಸಿಕೊಳ್ಳಲಾಗುವುದು ಎಂದು ಥಾಣೆ ಉಸ್ತುವಾರಿ ಸಚಿವ ಮತ್ತು ಹಿರಿಯ ಶಿವಸೇನೆ ಮುಖಂಡ ಏಕನಾಥ್‌ ಶಿಂಧೆ ತಿಳಿಸಿದ್ದಾರೆ.

Advertisement

ರಾಜ್ಯದಲ್ಲಿ ಮುಂಬಯಿ ಬಿಟ್ಟರೆ ಥಾಣೆ ಭಾಗವು ಸೋಂಕಿನಿಂದ ಹೆಚ್ಚು ಪೀಡಿತವಾಗಿದೆ. ಕೊಂಕಣ ವಿಭಾಗಕ್ಕೆ 109 ಕೋ. ರೂ., ಔರಂಗಾಬಾದ್‌ ವಿಭಾಗಕ್ಕೆ 20 ಕೋ. ರೂ. ಮಂಜೂರು ಮಾಡಲಾಗಿದೆ ಎಂದು ಸಚಿವ ಶಿಂಧೆ ಮಾಹಿತಿ ನೀಡಿದ್ದಾರೆ. ಥಾಣೆ ಜಿಲ್ಲೆಯ 35 ಕೋ. ರೂ.ಗಳಲ್ಲಿ ಥಾಣೆ ನಗರಕ್ಕೆ 5 ಕೋಟಿ ರೂ. ಹಾಗೂ ಮೀರಾ ಭಾಯಂದರ್‌, ಕಲ್ಯಾಣ್‌ ಮತ್ತು ನವಿಮುಂ ಬಯಿಗೆ ತಲಾ 10 ಕೋ. ರೂ. ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next