Advertisement

ಅತೃಪ್ತರು ಹೊಸ ಪಕ್ಷ ಕಟ್ಟಲು ಸ್ವತಂತ್ರರು

10:53 PM Aug 04, 2019 | Team Udayavani |

ಹುಬ್ಬಳ್ಳಿ: ಅತೃಪ್ತ ಶಾಸಕರು ಹೊಸ ಪಕ್ಷ ಕಟ್ಟಲು, ಇತರ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಲು ಸ್ವತಂತ್ರರು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರೊಂದಿಗೆ ನಮ್ಮ ಪಕ್ಷದ ಕೆಲ ನಾಯಕರು ಮಾತನಾಡಿದ್ದಾರೆ. ಬೇರೆ ಯಾವ ನಾಯಕರೂ ಕೂಡ ಸಂಪರ್ಕದಲ್ಲಿಲ್ಲ. ಅತೃಪ್ತ ಶಾಸಕರ ನಿರ್ಧಾರ ಅವರಿಗೆ ಬಿಟ್ಟಿದ್ದು.

Advertisement

ಪಕ್ಷಕ್ಕೆ ಸೇರ್ಪಡೆ ಕುರಿತು ಯಾವುದೇ ಚರ್ಚೆಗಳಾಗಿಲ್ಲ. ಮಾಜಿ ಪ್ರಧಾನಿ ದೇವೇಗೌಡ ಆ್ಯಂಡ್‌ ಕಂಪನಿಯ ಯಾವುದೇ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದಿಲ್ಲ. ತಂದೆ, ಮಕ್ಕಳು ಹಾಗೂ ಮೊಮ್ಮಕ್ಕಳು ಅದೆಷ್ಟೋ ಹೇಳಿಕೆಗಳನ್ನು ನೀಡಿದ್ದಾರೆ. ಅವುಗಳಂತೆ ನಡೆದುಕೊಂಡ ಉದಾಹರಣೆಯಿಲ್ಲ. ಇಂತಹ ಭಾವನಾತ್ಮಕ ಮಾತುಗಳನ್ನು ರಾಜ್ಯದ ಜನತೆ ನಂಬುವಷ್ಟು ದಡ್ಡರಲ್ಲ ಎಂದರು.

ನಾನು ಯಾವುದೇ ಸ್ಥಾನದ ನಿರೀಕ್ಷೆಯಲ್ಲಿಲ್ಲ. ಪಕ್ಷ ಹಾಗೂ ಹೈಕಮಾಂಡ್‌ ನೀಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸು ತ್ತೇನೆ. ಹಿಂದಿನಿಂದಲೂ ಯಾವುದೇ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ.
-ಜಗದೀಶ ಶೆಟ್ಟರ್‌, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next