Advertisement

ಚಿಣ್ಣರ ಪಾರ್ಕ್‌ನ ಅಭಿವೃದ್ಧಿ ಕಾಮಗಾರಿ ಆರಂಭ

02:42 PM Jan 02, 2018 | Team Udayavani |

ಪುತ್ತೂರು: ಪುತ್ತೂರು ಪೇಟೆಯ ಹೃದಯ ಭಾಗದಲ್ಲಿರುವ ನಗರಸಭೆ ಸುಪರ್ದಿಯ ಚಿಣ್ಣರ ಪಾರ್ಕ್‌ನ ಅಭಿವೃದ್ಧಿ ಕಾರ್ಯ ಕೊನೆಗೂ ಆರಂಭಗೊಂಡಿದೆ. ನಗರಸಭೆಯ 14 ನೇ ಹಣಕಾಸು ಯೋಜನೆಯಡಿಯಲ್ಲಿ 5 ಲಕ್ಷ ರೂ. ಅನುದಾನವನ್ನು ಮೀಸಲಿರಿಸಿ ಪಾರ್ಕ್‌ನ ಶುಚಿತ್ವ ಕಾಮಗಾರಿ, ವೇದಿಕೆ ಮುಂಭಾಗ ಶೀಟ್‌ ಹಾಸುವುದು, ಗ್ರೀನ್‌ ರೂಂ ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಪಾರ್ಕ್‌ನ ಸುತ್ತಲಿನ ಕಂಪೌಂಡ್‌ಗೆ ಬಣ್ಣ ಬಳಿಯುವ, ವೇದಿಕೆಯ ಮುಂಭಾಗದಲ್ಲಿ ಶೀಟ್‌ ಹಾಸುವ ಕೆಲಸ ಈಗಾಗಲೇ ಪೂರ್ತಿ ಗೊಂಡಿದೆ.

Advertisement

ಸದ್ಯಕ್ಕೆ ಪಾರ್ಕ್‌ನಲ್ಲಿ ಕಳೆ ಗಿಡಗಳು ಬೆಳೆದು ನಿಂತಿದ್ದು, ಅನಗತ್ಯ ಮರಗಳೂ ಬೆಳೆದಿವೆ. ವೇದಿಕೆ, ಗುಹೆಯಂತಹ ವಿನ್ಯಾಸ, ಹುಲ್ಲು ಹಾಸು, ಆಸನ ಸೇರಿದಂತೆ ಇತರ ವ್ಯವಸ್ಥೆಗಳು ಇವೆ. ಅಭಿವೃದ್ಧಿಗೊಳಿಸಿದ ಬಳಿಕ ವಿದ್ಯುತ್‌ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಒದಗಿಸುವ ಅಗತ್ಯವಿದೆ.

ಪ್ರಮುಖ ಪಾರ್ಕ್‌
ಪೇಟೆಯ ಮೂರು ಪಾರ್ಕ್‌ ಗಳ ಪೈಕಿ, ಸರಕಾರಿ ಆಸ್ಪತ್ರೆ ಬಳಿಯಿರುವ ಚಿಣ್ಣರ ಪಾರ್ಕ್‌ಗೆ ಹೆಚ್ಚಿನ ಮಹತ್ವವಿದೆ. ಮಕ್ಕಳ ಚಟುವಟಿಕೆ ಕೇಂದ್ರವಾಗಬೇಕು ಎಂಬ ದೃಷ್ಟಿಯಿಂದಲೇ ಈ ಪಾರ್ಕನ್ನು ನಿರ್ಮಿಸಲಾಗಿತ್ತು. ಈ ಹಿಂದೆ ಒಂದಷ್ಟು ಅನುದಾನ ಮೀಸಲಿಟ್ಟು, ಅಭಿವೃದ್ಧಿ ಕಾಮಗಾರಿ ನಡೆಸಲಾಗಿತ್ತು. ಆದರೆ ಅನಂತರದಲ್ಲಿ ಕಡೆಗಣಿಸಲ್ಪಟ್ಟಿತ್ತು.

ಕಾರ್ಯಕ್ರಮ ಸಂಘಟನೆ ಅಗತ್ಯ
ಮಕ್ಕಳಿಗೆ ನಿರ್ಮಿಸಲಾದ ಪಾರ್ಕ್‌ನಲ್ಲಿ ಮಕ್ಕಳ ಚಟುವಟಿಕೆಗಳು ನಡೆಯಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಸಂಘ ಟಿಸಲು ಪೂರಕವಾಗಿ ಪಾರ್ಕ್‌ ಅಭಿವೃದ್ಧಿಯಾಗಬೇಕು. ಅನಂತರ ಶಿಕ್ಷಣ ಇಲಾಖೆ, ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದು ಮಕ್ಕಳಿಗೆ ಪೂರಕ ಚಟುವಟಿಕೆಗಳನ್ನು ಸಂಘಟಿಸಬೇಕಾಗಿದೆ.

ಬಾಡಿಗೆಗೆ ಅವಕಾಶ 
ನಗರಸಭೆಯ ಹಿಂದಿನ ಆಡಳಿತದ ಅವಧಿಯಲ್ಲಿ ಅನುದಾನ ಮೀಸಲಿರಿಸಲಾಗಿತ್ತು. ಇದೀಗ ಗುತ್ತಿಗೆದಾರರು ಅಭಿವೃದ್ಧಿ ಕಾಮಗಾರಿ ನಡೆಸುತ್ತಿದ್ದಾರೆ. ಶೀಘ್ರ ಅಭಿವೃದ್ಧಿ ಕಾಮಗಾರಿಗಳು ನಡೆದ ಬಳಿಕ ಕಾರ್ಯಕ್ರಮಗಳನ್ನು ಸಂಘಟಿಸುವವರಿಗೆ ಬಾಡಿಗೆಗೆ ನೀಡಲು ಯೋಚಿಸಲಾಗಿದೆ.
ಜಯಂತಿ ಬಲ್ನಾಡು ಅಧ್ಯಕ್ಷರು, ನಗರಸಭೆ ಪುತ್ತೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next