Advertisement

ಮೀನು ಹಿಡಿಯಲು ಹೋದ ಮೂವರು ನೀರುಪಾಲು

11:15 PM Jul 21, 2019 | Team Udayavani |

ಸೊರಬ/ಚಂದ್ರಗುತ್ತಿ: ಮೀನು ಹಿಡಿಯಲು ಹೋಗಿದ್ದ ಮೂವರು ಯುವಕರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಚಂದ್ರಗುತ್ತಿ ಸಮೀಪದ ಜೋಳದಗುಡ್ಡೆ ಎಂಬಲ್ಲಿ ಭಾನುವಾರ ನಡೆದಿದೆ. ಜೋಳದಗುಡ್ಡೆ ಗ್ರಾಮದ ಸೊರಬ ಪಪೂ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳಾದ ಕಾರ್ತಿಕ್‌ (16), ಶರತ್‌ (17) ಹಾಗೂ ಗಾರೆ ಕೆಲಸ ಮಾಡುವ ಪ್ರದೀಪ್‌ (19) ಮೃತಪಟ್ಟವರು.

Advertisement

ಈ ಮೂವರು ಭಾನುವಾರ ಬೆಳಗ್ಗೆ ಸ್ನೇಹಿತರೊಂದಿಗೆ ಜೋಳದಗುಡ್ಡೆಯ ಹೊಸಮಠ ಕೆರೆಗೆ ಮೀನು ಹಿಡಿಯಲು ತೆರಳಿದ್ದರು. ಮೀನುಗಳನ್ನು ಹಿಡಿಯಲು ಕೆರೆಗಿಳಿದ ಮೂವರು ನೀರಿನ ಸುಳಿಗೆ ಸಿಲುಕಿದ್ದಾರೆ. ಈಜು ಬಾರದ್ದರಿಂದ ದಡಕ್ಕೆ ಬರಲಾಗದೆ ಮುಳುಗಿ ಮೃತಪಟ್ಟಿದ್ದಾರೆ.

ಇವರ ಜತೆಯಲ್ಲಿ ಹೋಗಿದ್ದ ಅಭಿಷೇಕ್‌ ಎಂಬಾತ ಕೆರೆಗಿಳಿಯದೆ ದಡದಲ್ಲಿಯೇ ನಿಂತಿದ್ದ. ಮೂವರು ಮುಳುಗುತ್ತಿರುವುದನ್ನು ಕಂಡು ಈತ ಕೂಗಿದ್ದಾನೆ. ಬೊಬ್ಬೆ ಕೇಳಿದ ಅಲ್ಲೇ ಸಮೀಪದಲ್ಲಿರುವ ಜನರು ಕೆರೆಗೆ ಧುಮುಕಿ ಯುವಕರನ್ನು ರಕ್ಷಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next