Advertisement

ಹಾವು ಕಚ್ಚಿ ಯೋಧ ಸಾವು

11:02 PM Sep 13, 2019 | Team Udayavani |

ಚಿಕ್ಕೋಡಿ: ಉತ್ತರ ಪ್ರದೇಶದಲ್ಲಿ ಕರ್ತವ್ಯದಲ್ಲಿರುವಾಗ ಹಾವು ಕಚ್ಚಿ ಮೃತಪಟ್ಟ ನಿಪ್ಪಾಣಿ ತಾಲೂಕಿನ ಸೌಂದಲಗಾ ಗ್ರಾಮದ ಸಿಐಎಸ್‌ಎಫ್‌ ಯೋಧ ಪ್ರಮೋದ ಬಾಬಾಸಾಹೇಬ ಮಾತುಕಡೆ (26) ಅಂತ್ಯಕ್ರಿಯೆ ಶುಕ್ರವಾರ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೇರವೇರಿಸಲಾಯಿತು. ಉತ್ತರ ಪ್ರದೇಶದ ಓವಾರಾದಲ್ಲಿ ಸಿಐಎಸ್‌ಎಫ್‌ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಮೋದಗೆ ಮಂಗಳವಾರ ರಾತ್ರಿ ಹಾವು ಕಚ್ಚಿತ್ತು.

Advertisement

ಕೂಡಲೇ ವಾರಣಾಸಿ ಮಿಲಿಟರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಯೋಧ ಮೃತಪಟ್ಟಿದ್ದಾರೆ. ಮೂರು ತಿಂಗಳ ಹಿಂದೆಯಷ್ಟೇ ನಿಪ್ಪಾಣಿ ತಾಲೂಕಿನ ಕುರ್ಲಿ ಗ್ರಾಮದ ಪ್ರಿಯಾಂಕಾ ಜೊತೆ ಪ್ರಮೋದ ಮದುವೆಯಾಗಿತ್ತು. ಅವರು ಪತ್ನಿ, ತಂದೆ-ತಾಯಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next