Advertisement

Siddapur: ಸೊಸೆಯನ್ನು ಮನೆಯಿಂದ ಹೊರಹಾಕಿ ಕೊಲೆ ಬೆದರಿಕೆ

09:01 PM Aug 13, 2023 | Team Udayavani |

ಸಿದ್ದಾಪುರ: ಹೆಂಗವಳ್ಳಿ ಗ್ರಾಮದ ತೊಂಬತ್ತು ನಿವಾಸಿಗಳಾದ ಪತಿ ಗಣೇಶ ಪೂಜಾರಿ, ಅತ್ತೆ ರಮಾವತಿ ಮತ್ತು ಮಾವ ಬಸವ ಪೂಜಾರಿ ಅವರು ಮಾನಸಿಕ ಹಿಂಸೆ ಹಾಗೂ ದೈಹಿಕ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಕುಂದಾಪುರ ಹೇರಿಕುದ್ರು ಕಳ್ಳಿನಮನೆ ಕಲಾವತಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಪ್ರಕರಣ
ಹೆಂಗವಳ್ಳಿ ಗ್ರಾಮದ ತೊಂಬತ್ತು ನಿವಾಸಿ ಗಣೇಶ ಪೂಜಾರಿ ಅವರೊಂದಿಗೆ 2011ರ ನ. 22ರಂದು ಗುರುಹಿರಿಯರ ಸಂಮುಖದಲ್ಲಿ ಕುಂದಾಪುರ ಹೇರಿಕುದ್ರು ಕಳ್ಳಿನಮನೆ ಕಲಾವತಿ ಅವರ ಮದುವೆ ನಡೆದಿತ್ತು. ಅನಂತರ ಪತಿ, ಅತ್ತೆ-ಮಾವ ಸೇರಿ ಹಿಂಸೆ ನೀಡಲು ಪ್ರಾರಂಭಿಸಿದ್ದರು. ಪತಿಯೊಂದಿಗೆ ಬೆಂಗಳೂರಿಗೆ ಹೋಗಿ ನೆಲಸಿದ್ದು, ಅಲ್ಲಿಯೂ ಪತಿ ಗಣೇಶ ಪೂಜಾರಿ ಹಿಂಸೆ ನೀಡಲು ಪ್ರಾರಂಭಿಸಿದರು. ಹೆರಿಗೆಗೆಂದು ಕಲಾವತಿ ಅವರನ್ನು ತವರು ಮನೆಯಾದ ಹೇರಿಕುದ್ರು ಮನೆಗೆ ಗಣೇಶ ಪೂಜಾರಿ ತಂದು ಬಿಟ್ಟು ಹೋದರು. ಅನಂತರ ಪತಿ ಯಾವುದೇ ರೀತಿಯ ಯೋಗಕ್ಷೇಮ ವಿಚಾರಿಸಿಲ್ಲ.

ಖರ್ಚಿಗೆ ಹಣ ಕೂಡ ನೀಡಲಿಲ್ಲ. 2023ರ ಆ. 11ರಂದು ಪತಿ ಮನೆಯಾದ ಹೆಂಗವಳ್ಳಿ ಗ್ರಾಮದ ತೊಂಬತ್ತುವಿಗೆ ಹೋದಾಗ ಮಾವ ಬಸವ ಪೂಜಾರಿ ಮತ್ತು ಅತ್ತೆ ರಮಾವತಿ ಹಲ್ಲೆ ನಡೆಸುವ ಮೂಲಕ ಮನೆಯ ಒಳಗಿನಿಂದ ಹೊರಗೆ ತಳ್ಳಿದ್ದಾರೆ. ಮಗ ನಿನ್ನನ್ನು ಮನೆಯ ಒಳಗಡೆ ಸೇರಿಸಬೇಡಿ ಎಂದಿದ್ದಾನೆ. ಒಳಗಡೆ ಬಂದರೆ ಕೊಲೆ ಮಾಡುವುದಾಗಿ ಬೇದರಿಕೆ ಹಾಕಿದ್ದಾರೆ ಎಂದು ಕಲಾವತಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next