ಚೆನ್ನೈ/ನವದೆಹಲಿ: ಯಾವನೇ ಒಬ್ಬ ಉತ್ತಮ ಹಿಂದೂ ಅಯೋಧ್ಯೆಯ ಬಾಬರಿ ಮಸೀದಿ ಇರುವ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸಲು ಒಪ್ಪುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಶಶಿ ತರೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಿರುವನಂತಪುರ ಕ್ಷೇತ್ರದ ಲೋಕಸಭೆ ಸದಸ್ಯರಾಗಿರುವ ಅವರು ಭಾನುವಾರ ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಸಾಹಿತ್ಯೋತ್ಸವದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದೇ ಭಾರತದ ಆದ್ಯತೆ. ಅದನ್ನು ಹೆಚ್ಚಿನ ಸಮಯ ನಿರಾಕರಿಸದೇ ಇರಲಾಗದು ಎಂದು ಹೇಳಿದ್ದಾರೆ. ಭಾರತೀಯರು ಮುಂದಿನ ದಿನಗಳಲ್ಲಿ ಅನಪೇಕ್ಷಿತ ದಿನಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ಮುಂದಿನ ದಿನಗಳಲ್ಲಿ ಆಡಳಿತಾರೂಡ ಬಿಜೆಪಿ ಕೋಮುವಾದಿ ಧ್ರುವೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ. ಅದು ನನ್ನ ಚಿಂತೆಯಾಗಿದೆ ಎಂದಿದ್ದಾರೆ
ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ದೇಗುಲವನ್ನು ತೆಗೆಯಬೇಕೆಂದು ತರೂರ್ ಬಯಸಿದ್ದಾರೋ? ಜತೆಗೆ ಅಲ್ಲಿ ಪೂಜೆಯನ್ನು ನಿಲ್ಲಿಸಬೇಕೆಂದು ಸಲಹೆ ನೀಡಿದ್ದಾರೋ? ಯಾರೂ ಇದುವರೆಗೆ ಅಂಥ ಸಲಹೆ ನೀಡಿಲ್ಲ
ಸಯ್ಯದ್ ಷಹನವಾಜ್ ಹುಸೇನ್, ಬಿಜೆಪಿ ವಕ್ತಾರ