Advertisement

Ayodhya ಮಂದಿರ ತೀರ್ಪು ಸರ್ವಾನುಮತದ್ದು ಎಂದ ಸಿಜೆಐ

12:21 AM Jan 02, 2024 | Team Udayavani |

ಹೊಸದಿಲ್ಲಿ: ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಅಯೋಧ್ಯೆಯ ಬೇರೆ ಸ್ಥಳದಲ್ಲಿ ಮಸೀದಿಗಾಗಿ 5 ಎಕರೆ ಸ್ಥಳ ನೀಡಬೇ ಕೆಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳು ಸರ್ವಾ ನುಮತದಿಂದ ನಿರ್ಧರಿಸಿದರು ಎಂದು ಸಿಜೆಐ ಡಿ.ವೈ.ಚಂದ್ರಚೂಡ್‌ ಹೇಳಿದರು.

Advertisement

2019ರ ನ.9ರ ತೀರ್ಪು ವೇಳೆ ಅಂದಿನ ಸಿಜೆಐ ಗೊಗೋಯ್‌ ನೇತೃತ್ವದ ಸಂವಿಧಾನ ಪೀಠದಲ್ಲಿ ಡಿ.ವೈ.ಚಂದ್ರಚೂಡ್‌ ಕೂಡ ಒಬ್ಬರಾಗಿದ್ದರು. ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಿಜೆಐ ಡಿ.ವೈ.ಚಂದ್ರಚೂಡ್‌, “ತೀರ್ಪು ನೀಡುವ ಮುನ್ನ ಐವರು ನ್ಯಾಯ ಮೂರ್ತಿಗಳು ಒಟ್ಟಿಗೆ ಕುಳಿತು ಚರ್ಚಿಸಿ ದೆವು. ಈ ವೇಳೆ ಒಮ್ಮ ತ ದ ತೀರ್ಮಾನ ಕೈಗೊಳ್ಳಲಾಯಿತು’ ಎಂದರು.

ಸಂವಿಧಾನದ ಪ್ರಕಾರ ತೀರ್ಪು

“ಜಮ್ಮು – ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಕೇಂದ್ರ ಸರಕಾರದ ಕ್ರಮವನ್ನು ಐವರು ನ್ಯಾಯಮೂರ್ತಿ ಗಳಿದ್ದ ನ್ಯಾಯಪೀಠ ಸರ್ವಾನು ಮತದಿಂದ ಎತ್ತಿಹಿಡಿ ಯಿತು. ಈ ಪ್ರಕರಣದಲ್ಲಿ ದೇಶದ ಸಂವಿಧಾನ ಮತ್ತು ಕಾನೂನು ಅನುಸರಿಸಿ ತೀರ್ಪು ನೀಡಲಾಗಿದೆ’ ಎಂದು ಸಿಜೆಐ ಹೇಳಿದರು.
ಪಾರದರ್ಶಕತೆ ಇಲ್ಲ ಎನ್ನುವುದು ಸರಿಯಲ್ಲ: “ಕೊಲಿಜಿಯಂ ವ್ಯವಸ್ಥೆ ಯಲ್ಲಿ ಪಾರದರ್ಶಕತೆ ಇಲ್ಲ ಎಂದು ಹೇಳುವುದು ಸರಿಯಲ್ಲ. ನ್ಯಾಯಮೂ ರ್ತಿಗಳ ನೇಮಕದಲ್ಲಿ ಪಾರದರ್ಶಕ ಕ್ರಮ ಅನುಸರಿಸಲಾಗುತ್ತಿದೆ. ವಸ್ತು ನಿಷ್ಠತೆ ಕಾಪಾಡಲಾಗುತ್ತಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next