Advertisement

Loksabha; ಮಂದಿರಕ್ಕೆ ಬಾಬರಿ ಲಾಕ್‌ ಬೀಳದಿರಲು 400 ಸೀಟು ಬೇಕು: ಪ್ರಧಾನಿ ಮೋದಿ

12:02 AM May 08, 2024 | Team Udayavani |

ಭೋಪಾಲ್‌:  ಕಾಶ್ಮೀರದಲ್ಲಿ 370ನೇ ವಿಧಿಯನ್ನು ಕಾಂಗ್ರೆಸ್‌ ಮರುಸ್ಥಾಪಿಸದಂತೆ ತಡೆಯಲು, ಅಯೋಧ್ಯೆಯ ರಾಮ ಮಂದಿರದ ಮೇಲೆ “ಬಾಬರಿ ಬೀಗ’ವನ್ನು ಹಾಕದಂತೆ ತಡೆಯವುದಕ್ಕಾಗಿ ಎನ್‌ಡಿಎಗೆ 400 ಕ್ಷೇತ್ರಗಳಲ್ಲಿ ಜಯ ಬೇಕಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಮಧ್ಯಪ್ರದೇಶದ ಧಾರ್‌ನಲ್ಲಿ ಚುನಾವಣೆ ರ್ಯಾಲಿಯನ್ನುದ್ದೇಶಿಸಿ ಪಿಎಂ ಮಾತನಾಡಿದ್ದಾರೆ. ಈ ವೇಳೆ ಮೋದಿಗೆ ಕೇಂದ್ರದಲ್ಲಿ 400 ಸೀಟು ಸಿಕ್ಕರೆ ಅವರು ಸಂವಿಧಾನ ಬದಲಿಸುತ್ತಾರೆ ಎಂದು ಕಾಂಗ್ರೆಸ್‌ ಹಬ್ಬಿಸುತ್ತಿದೆ. ಆದರೆ ಮೋದಿ ಈ ಜಯ ಬಯಸುತ್ತಿರುವುದು ಬೇರೆಯದ್ದೇ ಕಾರಣಗಳಿಗೆ ಎಂದು ತಮ್ಮ ಉದ್ದೇಶಗಳನ್ನು ಪಟ್ಟಿ ಮಾಡಿದ್ದಾರೆ.

ಕಾಂಗ್ರೆಸ್‌ ಒಬಿಸಿಗಳ ಮತವನ್ನು ದೋಚಿ, ವೋಟ್‌ಬ್ಯಾಂಕ್‌ಗೆ ಬಳಸದಂತೆ ತಡೆಯಲು. ದೇಶದ ದ್ವೀಪ ಪ್ರದೇಶಗಳನ್ನು, ಖಾಲಿ ಪ್ರದೇಶಗಳನ್ನು ವಿದೇಶಗಳಿಗೆ ಮಾರದಂತೆ ಕಾಯಲು. ಎಸ್ಸಿ, ಎಸ್ಟಿ, ಒಬಿಸಿಗಳ ಮೀಸಲನ್ನು ಕಿತ್ತು ವೋಟ್‌ ಬ್ಯಾಂಕ್‌ಗೆ ನೀಡದಿರಲು ಮತ್ತು ಕಾಂಗ್ರೆಸ್‌ನ ವೋಟ್‌ಬ್ಯಾಂಕ್‌ನ ಎಲ್ಲ ಜಾತಿಗಳನ್ನೂ ರಾತೋರಾತ್ರಿ ಒಬಿಸಿ ಎಂದು ಘೋಷಿಸದಂತೆ ತಡೆಯಲು ನನಗೆ 400 ಸೀಟುಗಳಲ್ಲಿ ಗೆಲುವು ಬೇಕಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next