Advertisement

Mangaluru: ಬಸ್‌ ತಂಗುದಾಣಗಳ ಅವ್ಯವಸ್ಥೆ: ಸಾರ್ವಜನಿಕರಿಗೆ ನಿತ್ಯ ಸಂಕಷ್ಟ

03:31 PM Jul 29, 2024 | Team Udayavani |

ಮಹಾನಗರ: ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಿಸಿರುವ ಅನೇಕ ಪ್ರಯಾಣಿಕ ತಂಗುದಾಣಗಳು ಅವ್ಯವಸ್ಥೆಯಿಂದ ಕೂಡಿವೆ. ಪ್ರಯಾಣಿಕರು ಮಳೆ, ಬಿಸಿಲಿಗೆ ಸಂಕಷ್ಟ ಎದುರಿಸುವಂತಾಗಿದೆ.

Advertisement

ನಗರದ ಲಾಲ್‌ಬಾಗ್‌ನಿಂದ ಬಿಜೈ ತೆರಳುವ ರಸ್ತೆಯ ಭಾರತ್‌ಮಾಲ್‌ ಬಳಿಯ ತಂಗುದಾಣವೊಂದು ಅವ್ಯವಸ್ಥೆಯಿಂದ ಕೂಡಿದೆ. ಮಳೆ ಬರುವ ವೇಳೆ ಆಶ್ರಯ ಪಡೆಯಲು ಬರುವವರು ಸಂಪೂರ್ಣ ಒದ್ದೆಯಾಗುವ ಸನ್ನಿವೇಶ ಇಲ್ಲಿದೆ. ಅಸಮರ್ಪಕವಾಗಿ ತಂಗುದಾಣ ನಿರ್ಮಿಸಿದ್ದು, ಮಳೆ ಸುರಿಯುವ ವೇಳೆ ತಂಗುದಾಣದೊಳಗೆ ನೀರು ನುಗ್ಗುತ್ತಿದೆ.

ಮಳೆಯಾಗುವ ವೇಳೆ ಮುಂಭಾಗದಿಂದಲೂ ನೀರು ತಂಗುದಾಣದೊಳಗೆ ಬೀಳುವುದು ಸಾಮಾನ್ಯ. ತಂಗುದಾಣದ ಹಿಂಭಾಗದಲ್ಲಿರುವ ಗೋಡೆಯಿಂದ ತಂಗುದಾಣದೊಳಗೆ ನೀರು ಬೀಳುತ್ತಿದೆ. ಇದರಿಂದ ತಂಗುದಾಣ ಪ್ರಯಾಣಿಕರಿಗೆ ಬಳಕೆಗೆ ಇಲ್ಲದಂತಾಗಿದೆ. ಗೋಡೆಯಿಂದ ಬೀಳುವ ನೀರಿಗೆ ಪೈಪ್‌ಗಳನ್ನು ಅಳವಡಿಸಬೇಕು ಅಥವಾ ನಿಲ್ದಾಣದ ಹಿಂಭಾಗಕ್ಕೆ ತಡೆಯನ್ನು ನಿರ್ಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಲವು ನಿಲ್ದಾಣಗಳಿಗೆ ನುಗ್ಗುತ್ತಿದೆ ಮಳೆ ನೀರು
ನಗರದ ಅನೇಕ ತಂಗುದಾಣದೊಳಗೆ ನೀರು ನುಗ್ಗುತ್ತಿದ್ದು ಪ್ರಯಾಣಿಕರು ಪರಿತಪಿಸುವಂತಾಗಿದೆ. ಬಜಾಲ್‌ ಸಮೀಪ ಜಿ.ಎಂ. ರೋಡ್‌ನ‌ಲ್ಲೂ ಇಂತಹದೇ ಪರಿಸ್ಥಿತಿ ಇದೆ. ಪ್ರಯಾಣಿಕ ತಂಗುದಾಣದೊಳಗೆ ಪ್ರಯಾಣಿಕರಿಗೆ ನಿಲ್ಲಲು ಸಾಧ್ಯವಾಗುತ್ತಿಲ್ಲ. ಮಳೆ ನೀರು ಸಂಪೂರ್ಣ ತಂಗುದಾಣದ ಒಳಗೆ ಬಿಳುತ್ತಿದೆ ಎಂಬುವುದು ಸಾರ್ವಜನಿಕರ ಆರೋಪ. ಇಂತಹ ಅನೇಕ ನಿಲ್ದಾಣಗಳಿದ್ದು, ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ.

Advertisement

ದುರಸ್ತಿಗೆ ಕ್ರಮಕೈಗೊಳ್ಳಿ
ಭಾರೀ ಗಾಳಿ, ಮಳೆ ಬಂದ ವೇಳೆ ರಕ್ಷಣೆ ಪಡೆಯಲು ಬಸ್‌ ನಿಲ್ದಾಣಕ್ಕೆ ದೌಡಾಯಿಸಿದೆ. ಆದರೆ ಅಲ್ಲಿ ನೀರು ಬೀಳದ ಜಾಗವೇ ಇರಲಿಲ್ಲ. ಸ್ವಲ್ಪ ಗಾಳಿ ಬಂದಾಗ ಎಲ್ಲ ಕಡೆಗಳಿಂದ ನೀರು ಬೀಸಿ ಒದ್ದೆಯಾದೆವು. ಪಾಲಿಕೆ ಇಂತಹ ನಿಲ್ದಾಣಗಳನ್ನು ಸರಿಪಡಿಸಬೇಕು.
-ಸೌಮ್ಯಾ ಕೆ.,ನಿತ್ಯ ಪ್ರಯಾಣಿಕ

Advertisement

Udayavani is now on Telegram. Click here to join our channel and stay updated with the latest news.

Next