Advertisement

ಕಿರುಸೇತುವೆಯಿಂದ ಉರುಳಿದ ಕಾರು : ನಾಲ್ಕು ಮಂದಿಗೆ ಗಾಯ

08:10 AM Sep 11, 2017 | Team Udayavani |

ಸುಳ್ಯ: ಉಪ್ಪಿನಂಗಡಿಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಕಿರು ಸೇತುವೆಯಿಂದ ಕೆಳಗೆ ಬಿದ್ದು ಅಪಘಾತವಾದ ಘಟನೆ ಕಲ್ಲುಗುಂಡಿಯ ಕಡೆಪಾಲದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

Advertisement

ಕಾರಿನಲ್ಲಿದ್ದ ಉಪ್ಪಿನಂಗಡಿಯವರಾದ ಕಾರ್ತಿಕ್‌ ಕಾಮತ್‌, ರವೀಂದ್ರ ಕಾಮತ್‌, ಕಿರಣ್‌ ಕಾಮತ್‌, ಸುಧಾಕರ ಕಾಮತ್‌ ಗಾಯಗೊಂಡಿದ್ದಾರೆ.

ಮಧ್ಯರಾತ್ರಿ ಈ ಘಟನೆ ಸಂಭವಿಸಿದ್ದು, ಹಿಂದಿನಿಂದ ಬಂದ ಕಾರಿನವರು ಇವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿದರೆಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next