Advertisement

“ಬುದ್ಧಿವಂತ’ನ ಭರ್ಜರಿ ಫೈಟ್‌

10:05 AM Dec 29, 2019 | Lakshmi GovindaRaj |

ಉಪೇಂದ್ರ ಅಭಿನಯದ “ಬುದ್ಧಿವಂತ-2′ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶಿವಮೊಗ್ಗದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬಂದ ಚಿತ್ರತಂಡ ಈಗ ಚಿಕ್ಕಬಳ್ಳಾಪುರದತ್ತ ತೆರಳಿದೆ. ಅದು ಆ್ಯಕ್ಷನ್‌ ಎಪಿಸೋಡ್‌ಗಾಗಿ. ಹೌದು, “ಬುದ್ಧಿವಂತ-2′ ಚಿತ್ರದ ಚಿತ್ರೀಕರಣ ಚಿಕ್ಕಬಳ್ಳಾಪುರದ ರಂಗಸ್ಥಳಂ ಎಂಬ ದೇವಸ್ಥಾನದಲ್ಲಿ ನಡೆಯುತ್ತಿದೆ.

Advertisement

ನಾಯಕ-ನಾಯಕಿಯ ಮದುವೆ ವೇಳೆ ನುಗ್ಗುವ ರೌಡಿಗಳೊಂದಿಗೆ ಉಪೇಂದ್ರ ಹೊಡೆದಾಡುತ್ತಿದ್ದಾರೆ. ಸುಮಾರು 40ಕ್ಕೂ ಹೆಚ್ಚು ರೌಡಿಗಳನ್ನು ಹೊಡೆದುರುಳಿಸುವ ದೃಶ್ಯವನ್ನು ನಿರ್ದೇಶಕ ಜಯರಾಂ ಭದ್ರಾವತಿ ಚಿತ್ರೀಕರಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕಾಗಿ ಸೆಟ್‌ಗಳನ್ನು ಕೂಡಾ ಹಾಕಲಾಗಿದೆ.

ಸೋನಾಲ್‌ ಮೊಂತೆರೋ ನಾಯಕಿಯಾಗಿರುವ ಈ ಚಿತ್ರವನ್ನು ಕ್ರಿಸ್ಟಲ್‌ ಪಾರ್ಕ್‌ ಬ್ಯಾನರ್‌ನಡಿ ಟಿ.ಆರ್‌.ಚಂದ್ರಶೇಖರ್‌ ನಿರ್ಮಿಸುತ್ತಿದ್ದಾರೆ. ಈ ಹಿಂದೆ “ಚಮಕ್‌’, “ಆಯೋಗ್ಯ’, “ಬೀರ್‌ಬಲ್‌’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿರುವ ಚಂದ್ರಶೇಖರ್‌ ಈಗ ಉಪೇಂದ್ರ ಅವರ ಸಿನಿಮಾ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next