Advertisement
ಮುಷ್ಕರದ ಬಗ್ಗೆ ಸಂಘಟನೆಗಳ ನಡುವೆಯೇ ಭಿನ್ನಾಭಿಪ್ರಾಯ ಇರುವುದರಿಂದ ಲಾರಿ ಮಾಲಿಕರು ಮತ್ತು ಏಜೆಂಟರ ನಡುವಿನ ಗೊಂದಲಕ್ಕೆ ಕಾರಣವಾಯಿತು. ಪರಿಣಾಮ ನಿರೀಕ್ಷೆಯಂತೆ ಮುಷ್ಕರ ಯಾವುದೇ ಪರಿಣಾಮ ಬೀರಲಿಲ್ಲ. ಸರಕು-ಸಾಗಣೆ ಎಂದಿನಂತೆ ಇತ್ತು. ಅಗತ್ಯವಸ್ತುಗಳಾದ ಹಾಲು, ಹಣ್ಣು-ತರಕಾರಿ, ಪೆಟ್ರೋಲ್-ಡೀಸೆಲ್ಗೆ ಯಾವುದೇ ಅಡತಡೆ ಆಗಲಿಲ್ಲ. ಅಪರೂಪಕ್ಕೆ ಅಲ್ಲಲ್ಲಿ ಲಾರಿಗಳು ನಿಲುಗಡೆ ಆಗಿದ್ದು ಕಂಡುಬಂತು.
Related Articles
Advertisement
ಲಕ್ಷಾಂತರ ಸರಕು-ಸಾಗಾಣೆ ವಾಹಗಳಿದ್ದು, ಮಾಲಿಕರ ಸಂಘಟನೆಗಳೂ ಹಲವಾರು ಇವೆ. ಈ ಸಂಘಟನೆಗಳ ನಡುವೆ ಒಡಕು ಇರುವುದರಿಂದ ಮುಷ್ಕರಕ್ಕೆ ಹಿನ್ನಡೆಯಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಅಖೀಲ ಭಾರತ ಟ್ರಕ್ ಮಾಲೀಕರ ಒಕ್ಕೂಟವು ಇತರೆ ಸಂಘಟನೆಗಳನ್ನು ಸಂಪರ್ಕಿಸಿ,
ಚರ್ಚಿಸದೆ ಏಕಾಏಕಿ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಇತರೆ ಸಂಘಟನೆಗಳು ಮುಷ್ಕರದಿಂದ ಹಿಂದೆ ಉಳಿದಿವೆ. ರಾಜ್ಯದಲ್ಲೂ ಸರಕು-ಸಾಗಣೆ ವಾಹನಗಳ ಮಾಲೀಕರ ಹಲವು ಸಂಘಟನೆಗಳಿದ್ದು, ಭಿನ್ನಾಭಿಪ್ರಾಯ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಮುಷ್ಕರ ಬೆಂಬಲಿಸಿಲ್ಲ ಎನ್ನಲಾಗಿದೆ.