Advertisement

Road Mishap; ಕುಂದಾಪುರ: ಲಾರಿ ಢಿಕ್ಕಿಯಾಗಿ ರಿಕ್ಷಾ ಪಲ್ಟಿ

10:53 PM Apr 21, 2024 | Team Udayavani |

ಕುಂದಾಪುರ: ಗುಲ್ವಾಡಿ – ಮಾವಿನಕಟ್ಟೆ ರಸ್ತೆಯ ಅಕ್ಷಾಲೆ ಕಟ್ಟೆ ಬಳಿ ಇನ್ಸುಲೆಟರ್‌ ಲಾರಿ ಢಿಕ್ಕಿಯಾಗಿ ರಿಕ್ಷಾ ಪಲ್ಟಿಯಾದ ಪರಿಣಾಮ ರಿಕ್ಷಾ ಚಾಲಕ ಭೋಜ (46) ಗಾಯಗೊಂಡ ಘಟನೆ ಎ. 19 ರಂದು ಸಂಭವಿಸಿದೆ.

Advertisement

ಗಾಯಗೊಂಡ ಭೋಜ ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಢಿಕ್ಕಿ: ಸೈಕಲ್‌ ಸವಾರನಿಗೆ ಗಾಯ
ಕುಂದಾಪುರ: ಕೋಣಿ ಗ್ರಾಮದ ಹುಣ್ಸೆಕಟ್ಟೆ ಬ್ರಿಡ್ಜ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಬ್ಯಾಟರಿ ಸೈಕಲ್‌ಗೆ ಅನಂತ ಅವರು ಚಲಾಯಿಸುತ್ತಿದ್ದ ಕಾರು ಢಿಕ್ಕಿಯಾಗಿ ಸೈಕಲ್‌ ಸವಾರ ಫೆಡ್ರಿಕ್‌ ಡಿ’ಸೋಜಾ (62) ಅವರು ಗಾಯಗೊಂಡ ಘಟನೆ ಎ. 18 ರಂದು ಸಂಜೆ 6.30 ರ ಸುಮಾರಿಗೆ ಸಂಭವಿಸಿದೆ.

ಗಾಯಗೊಂಡ ಫೆಡ್ರಿಕ್‌ ಡಿ’ಸೋಜಾ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next