Advertisement

Uppinangady ಟ್ಯಾಂಕರ್‌-ಕಂಟೈನರ್‌ ಲಾರಿ ಢಿಕ್ಕಿ: ಚಾಲಕ ಗಂಭೀರ

12:44 AM Apr 22, 2024 | Team Udayavani |

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪೆರ್ನೆ ಗ್ರಾಮದ ಮೈರಕಟ್ಟೆಯಲ್ಲಿ ಟ್ಯಾಂಕರ್‌ ಮತ್ತು ಕಂಟೈನರ್‌ ಲಾರಿ ನಡುವೆ ಢಿಕ್ಕಿ ಸಂಭವಿಸಿ ಲಾರಿ ಚಾಲಕ ಯಶವಂತ್‌ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.

Advertisement

ಬೆಂಗಳೂರಿನಿಂದ ಮಂಗಳೂರಿನಿತ್ತ ಸರಕು ಸಾಗಾಟ ಮಾಡಿಕೊಂಡು ಹೋಗುತ್ತಿದ್ದ ಕಂಟೈನರ್‌ ಲಾರಿ ಪೆರ್ನೆಯ ಮೈರಕಟ್ಟೆಯಲ್ಲಿ ಹೆದ್ದಾರಿಗೆ ಅಳವಡಿಸಲಾದ ಹಂಪ್ಸ್‌ನಲ್ಲಿ ನಿಯಂತ್ರಣ ತಪ್ಪಿ ಎದುರುಗಡೆಯಿಂದ ಬಂದ ಟ್ಯಾಂಕರ್‌ಗೆ ಢಿಕ್ಕಿ ಹೊಡೆಯಿತು.

ಪರಿಣಾಮ ಲಾರಿಯ ಮುಂಭಾಗ ನಜ್ಜುಗುಜ್ಜಾಗಿ ಅದರಲ್ಲಿ ಸಿಲುಕಿದ್ದ ಚಾಲಕ ಯಶವಂತರನ್ನು ಸ್ಥಳೀಯರು ಪ್ರಯಾಸದಿಂದ ಹೊರಗೆ ತೆಗೆದಿದ್ದರು. ಆಬಳಿಕ ಅವರನ್ನು ಮಂಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಟ್ರಾಫಿಕ್‌ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next