Advertisement

ಬಿಜೆಪಿ ಗಲಭೆ ರಾಜಕೀಯ ರಾಜ್ಯದಲ್ಲಿ ನಡೆಯಲ್ಲ

12:21 PM Jan 10, 2018 | Team Udayavani |

ಪಿರಿಯಾಪಟ್ಟಣ: ಧರ್ಮಧರ್ಮಗಳ ನುಡುವೆ ಕಲಹ ತಂದು ಗಲಭೆಯ ಮೂಲಕ ರಾಜಕೀಯ ಮಾಡುವ ಬಿಜೆಪಿ ಕಾರ್ಯ ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು.

Advertisement

ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ಕೊಡಗಿಗೆ ತೆರಳುತ್ತಿದ್ದ ಮಾರ್ಗ ಮಧ್ಯೆ ಆದಿಜಾಂಬವ ಸಂಘದ ಸದಸ್ಯರ  ಸ್ವಾಗತ ಸ್ವೀಕರಿಸಿ ಮಾತನಾಡಿದ ಅವರು, ಎಲ್ಲಾ ಧರ್ಮಗಳು ವಿಶ್ವಾಸದಿಂದ ರಾಜ್ಯದಲ್ಲಿ ಇವೆ. ಅಭಿವೃದ್ಧಿ ಹೆಸರಿನಲ್ಲಿ ರಾಜಕೀಯ ಮಾಡಬೇಕು ಇದು ಬಿಟ್ಟು ಧರ್ಮಧರ್ಮಗಳನ್ನು ಎತ್ತಿಕಟ್ಟುವ ಕೆಲಸವಾಗುತ್ತಿದೆ.

ಬುದ್ಧ, ಗಾಂಧಿ, ಅಂಬೇಡ್ಕರ್‌, ಬಸವಣ್ಣನವರ ಸಾಮಾಜಿಕ ನ್ಯಾಯದ ಚಿಂತನೆಯನ್ನೆ ಸಿದ್ದರಾಮಯ್ಯ ನೇತೃತ್ವ ಜಾರಿಗೆ ತರುವ ಪ್ರಯತ್ನ ಮಾಡುತ್ತಿದ್ದು. ಅಹಿಂದ, ರೈತರು, ದಲಿತರು ಎಲ್ಲಾ ವರ್ಗದ ಜನರಿಗೆ ಸವತ್ತುಗಳನ್ನು ನೀಡಲಾಗಿದ್ದು 4.5 ಕೋಟಿ ಜನರಿಗೂ ಕಾರ್ಯಕ್ರಮಗಳು ನೇರವಾಗಿ ಮುಟ್ಟಿವೆ ಜನರು ನಮ್ಮ ಪರವಾಗಿದ್ದು, ಪರಮೇಶ್ವರ್‌ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆ ಮಾಡಲಿದೆ ಎಂದು ತಿಳಿಸಿದರು.

ಸಭೆ ನಡೆಸಿ ಟಿಕೆಟ್‌ ತೀರ್ಮಾನ: ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಸಭೆ ಕರೆಯುವುದಾಗಿ ಹುಬ್ಬಳ್ಳಿ ಸಮಾವೇಶದಲ್ಲಿ ಹೇಳಿದ್ದು, ಶೋಷಿತ ಸಮುದಾಯ ಗುರುತಿಸಿ ಅವುಗಳಿಗೆ ನ್ಯಾಯ ದೊರಕಿಸಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಸೀಟು ಹಂಚಿಕೆ ವಿಚಾರದಲ್ಲಿ ಎಲ್ಲರೂ ಕುಳಿತು ಒಗ್ಗಟ್ಟಿನಿಂದ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆದಿಜಾಂಬವ ಸಂಘದ ರಾಜಾಧ್ಯಕ್ಷ ಡಾ.ತಿಮ್ಮಯ್ಯ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಸಿಗೂರುವಿಜಯ್‌ಕುಮಾರ್‌, ತಾ. ಆದಿಜಾಂಭವ ಸಂಘದ ಅಧ್ಯಕ್ಷ ಭೂತನಹಳ್ಳಿ ಶಿವಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next