Advertisement

ಗುಜರಾತ್ ಫಲಿತಾಂಶದ ನಂತರ ಬಹುದೊಡ್ಡ ಹಗರಣ ಬಯಲು: ಎಚ್ ಡಿಕೆ!

02:19 PM Dec 14, 2017 | Sharanya Alva |

ಬೆಂಗಳೂರು:ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷ ಸೇರಿದಂತೆ ಎಲ್ಲರೂ ಗುಜರಾತ್ ಫಲಿತಾಂಶದಿಂದ ಎದುರು ನೋಡುತ್ತಿದ್ದಾರೆ. ಹೀಗಾಗಿ ಗುಜರಾತ್ ಫಲಿತಾಂಶದ ಬಳಿಕ ಸಾಕ್ಷ್ಯಾಧಾರ ಸಹಿತ ಸ್ಫೋಟಕ ಸುದ್ದಿ ಬಯಲು ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತೊಂದು ಬಾಂಬ್ ಹಾಕಿದ್ದಾರೆ!

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸುಮ್ಮ, ಸುಮ್ಮನೆ ನಾನೇನು ಆರೋಪ ಮಾಡಲ್ಲ, ಡಿಸೆಂಬರ್ 18ರ ನಂತರ ಸಾಕ್ಷ್ಯಾಧಾರಗಳ ಮೂಲಕ ಸುದ್ದಿಯನ್ನು ಬಹಿರಂಗಗೊಳಿಸುವುದಾಗಿ ಹೇಳಿದರು.

ಗುಜರಾತ್ ಫಲಿತಾಂಶ ಬರಲಿ, ಮೈಸೂರು ಮಿನರಲ್ಸ್ ಮೂಲಕ ನಡೆದ ಬಹುದೊಡ್ಡ ಹಗರಣವನ್ನು ಬಯಲು ಮಾಡುತ್ತೇನೆ ಎಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಎಚ್ ಡಿಕೆ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next