Advertisement

ಅಡಕೆ ಕದೊಯ್ಯಲು ಮರಗಳನೇ ಕತ್ತರಿಸಿದ ಕಿಡಿಗೇಡಿಗಳು

01:53 PM Nov 05, 2021 | Team Udayavani |

ಸಕಲೇಶಪುರ: ಅಡಕೆ ಕದ್ದೊಯ್ಯಲು ರೈತನ ಜಮೀನಿನಲ್ಲಿ ಬೆಳೆಯಲಾಗಿದ್ದ ಅಡಕೆ ಮರಗಳನ್ನೇ ಕತ್ತರಿಸಿರುವ ಘಟನೆ ಪಟ್ಟಣದ ಸಮೀಪ ನಡೆದಿದೆ.

Advertisement

ತಾಲೂಕಿನ ಕಸಬಾ ಹೋಬಳಿ ಬೈಕೆರೆ ಗ್ರಾಮದ ಹೇಮಾವತಿ ಹೊಳೆ ಹಾಗೂ ರೈಲ್ವೆ ಸೇತುವೆ ಪಕ್ಕದಲ್ಲಿ ಪಟ್ಟಣದ ನಿವೃತ್ತ ಶಾಲಾ ಶಿಕ್ಷಕರಾದ ಸುಬ್ರಹ್ಮಣ್ಯ ಎಂಬವರು ಸುಮಾರು 3 ಎಕರೆ ಜಾಗದಲ್ಲಿ ಕಷ್ಟಪಟ್ಟು ಅಡಕೆ ಹಾಗೂ ಕಾಫಿ ಬೆಳೆದಿದ್ದರು. ಬುಧವಾರ ರಾತ್ರಿ ದುಷ್ಕರ್ಮಿಗಳು ಸುಮಾರು 15 ಮರ ಕತ್ತರಿಸಿ ಅಡಕೆಗೊನೆಗಳನ್ನು ಕದ್ದೊಯ್ದಿದ್ದಾರೆ.

ಇದನ್ನೂ ಓದಿ:- ತೇಜಸ್ವಿ ಪ್ರತಿಷ್ಠಾನದಿಂದ ಕನ್ನಡ ಕೈ ಬರಹ ಸ್ಪರ್ಧೆ

ರೈತನ ಕಣ್ಣೀರು:ಅಪಾರ ಪ್ರಮಾಣದ ಅಡಕೆ ಕದ್ದೊಯ್ದಿರುವುದಲ್ಲದೆ ಸುಮಾರು 15 ವರ್ಷ ಶ್ರಮ ಪಟ್ಟು ಬೆಳೆಸಿದ ಅಡಕೆ ಮರ ನೆಲದ ಪಾಲಾಗಿದ್ದು ರೈತ ಸುಬ್ರಹ್ಮಣ್ಯ ಕಣ್ಣೀರು ಹಾಕುವಂತಾಗಿದೆ. ಅಡಕೆ ದರ ಟನ್‌ಗೆ ಸುಮಾರು 45 ಸಾವಿರಕ್ಕೂ ಹೆಚ್ಚಿದ್ದು ಈ ಹಿನ್ನೆಲೆ ಕೆಲವು ಕಿಡಿಗೇಡಿಗಳು ಮರ ಹತ್ತಿ ಅಡಕೆ ಕುಯ್ಯಲಾಗದೆ ಮರಗಳನ್ನೇ ಕತ್ತರಿಸಿದ್ದಾರೆ.

ಈ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಲು ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಕಸಬಾ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಲೋಹಿತ್‌ ಕೌಡಹಳ್ಳಿ ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next