Advertisement

ನಟಿ ಲೀಲಾವತಿ ತೋಟಕ್ಕೆ ಬೆಂಕಿ: ತೆಂಗು, ಅಡಕೆ ನಾಶ

12:23 PM Feb 14, 2017 | |

ನೆಲಮಂಗಲ: ತಾಲೂಕಿನ ಮೈಲನಹಳ್ಳಿಯಲ್ಲಿ ಹಿರಿಯ ನಟಿ ಲೀಲಾವತಿ ಅವರ ತೋಟಕ್ಕೆ ಸೋಮವಾರ ಮಧ್ಯಾಹ್ನ ಬೆಂಕಿ ಬಿದ್ದು ತೆಂಗು, ಅಡಕೆ, ಸಪೋಟ ಮತ್ತಿತರ ಮರಗಳು ನಾಶವಾಗಿವೆ. ವಿಷಯ ತಿಳಿದು ಕೂಡಲೇ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತೋಟದಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದರು. ಅಷ್ಟರಲ್ಲಾಗಲೇ ತೋಟದಲ್ಲಿ ಸೊಂಪಾಗಿ ಬೆಳೆದಿದ್ದ ಫ‌ಸಲಭರಿತ ತೆಂಗು, ಅಡಕೆ, ಸಪೋಟ ಮರಗಳು ಹಾಗೂ ವಿದೇಶಿ ಗಿಡಗಳು ಬೆಂಕಿಗಾಹುತಿಯಾಗಿದ್ದವು.

Advertisement

ಸೋಮವಾರ ಬೆಳಗ್ಗೆ ಲೀಲಾವತಿ ಹಾಗೂ ಅವರ ಪುತ್ರ ವಿನೋದ್‌ ರಾಜ್‌ ಭೂ ವಿಚಾರವಾಗಿ ಬೆಂಗಳೂರಿಗೆ ತೆರಳಿದ್ದರು. ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ತೋಟಕ್ಕೆ ಬೆಂಕಿ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ತೋಟಕ್ಕೆ ಧಾವಿಸಿದ ಅವರು, ಗಿಡ ಮರಗಳು ಸುಟ್ಟು ಹೋಗಿರುವುದನ್ನು ಕಂಡು ಕಣ್ಣೀರಿಟ್ಟರು. ಈ ವೇಳೆ ಮಾತನಾಡಿದ ಲೀಲಾವತಿ, ತೋಟದಲ್ಲಿ ಗಿಡಗಳನ್ನು ನಮ್ಮ ಮಕ್ಕಳಂತೆ ಸಾಕಿದ್ದೆವು.

ಕೆಲ ಕಿಡಿಗೇಡಿಗಳು ತಮ್ಮ ತೋಟಕ್ಕೆ ಬೆಂಕಿ ಹಚ್ಚಿ ತಮಗೆ ಕಣ್ಣೀರಿಡುವಂತೆ ಮಾಡುತ್ತಿದ್ದಾರೆ. ನೆಲಮಂಗಲದ ರೈತರ ಪರವಾಗಿ ತಾವು ಸಾಕಷ್ಟು ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಅದರೆ, ತಮ್ಮ ಹೋರಾಟಕ್ಕೆ ಈ ರೀತಿಯಾಗಿ ಪ್ರತಿಫ‌ಲ ದೊರೆಯುತ್ತಿದೆ ಎಂದು ಕಣ್ಣೀರು ಹಾಕಿದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next