Advertisement

ಅಪಘಾತ ವಲಯವಾದ ಬೊಬ್ಬರ್ಯನಕಟ್ಟೆ ಪರಿಸರ

07:50 AM Jun 12, 2018 | Team Udayavani |

ಕೋಟ: ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಆರಂಭವಾದ ದಿನದಿಂದ ಹಲವು ಕಡೆಗಳಲ್ಲಿ ಅಪಘಾತ ಗಳ ಸಂಖ್ಯೆ ಹೆಚ್ಚುತ್ತಿದೆ. ಅದೇ ರೀತಿ ಕೋಟ-ಮಣೂರು ನಡುವಿನ ಬೊಬ್ಬರ್ಯನಕಟ್ಟೆ ಆಸು-ಪಾಸು ಪ್ರದೇಶ ಕೂಡ ಖಾಯಂ ಅಪಘಾತ ವಲಯವಾಗಿ ಮಾರ್ಪಟ್ಟಿದೆ.

Advertisement

ಹಲವು ಅಪಘಾತ
2017-18ನೇ ಸಾಲಿನ ಒಂದು ವರ್ಷ ದಲ್ಲಿ 8 ಅಪಘಾತ ನಡೆದಿದ್ದು  4ಮಂದಿ ಸಾವನ್ನಪ್ಪಿ,  4 ಮಂದಿ ಗಾಯಗೊಂಡಿದ್ದಾರೆ. ಅಪಘಾತದ ಸರಣಿ ಇನ್ನೂ ಕೂಡ ಮುಂದುವರಿದಿದ್ದು ಜೂ.10ರಂದು ನಡೆದ ಅಪಘಾತದಲ್ಲಿ ಬೈಕ್‌ ಸಹಸವಾರ ಮೃತಪಟ್ಟು, ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.  ಇವೆಲ್ಲ  ಪ್ರಕರಣ ದಾಖಲಾದ ಅಪಘಾತಗಳಾದರೆ ಸಣ್ಣ- ಪುಟ್ಟ ಗಾಯಗಳಾಗಿ ರಾಜಿಯಲ್ಲಿ ಇತ್ಯರ್ಥ ಗೊಂಡ ಘಟನೆಗಳು ಸಾಕಷ್ಟಿದೆ.

ಅಸುರಕ್ಷಿತ ರಸ್ತೆ ದಾಟು 
ಪಾದಚಾರಿಗಳು ಎಲ್ಲೆಂದರಲ್ಲಿ ರಸ್ತೆ ದಾಟುವುದನ್ನು ತಡೆಗಟ್ಟು ಸಲುವಾಗಿ ಇಲ್ಲಿ ತಡೆ ಬೇಲಿಗಳನ್ನು ಅಳವಡಿಸಲಾಗಿದೆ ಹಾಗೂ ಇನ್ನೂ  ಹಲವು ಕಡೆಗಳಲ್ಲಿ ತಡೆ ಬೇಲಿ ತೆಗೆದು ರಸ್ತೆ ದಾಟಲು ಅನುಕೂಲ ಮಾಡಿಕೊಡಲಾಗಿದೆ. ಇಲ್ಲಿ ಪ್ಲೈಓವರ್‌ನ ಅಂತ್ಯಗೊಳ್ಳುವುದು  ಹಾಗೂ ನೇರ ರಸ್ತೆ ಇರುವುದರಿಂದ ವಾಹನಗಳು ಸಾಕಷ್ಟು ವೇಗವಾಗಿ ಬದು ರಸ್ತೆ ದಾಟುವವರಿಗೆ ಹಲವು ಅಪಘಾತಗಳು ನಡೆಯುತ್ತಿದೆ. ತಡೆಬೇಲಿ ಕೂಡ ಅವೈಜ್ಞಾನಿಕವಾಗಿದೆ.

ಅಪಘಾತ ತಡೆಗೆ ಕ್ರಮ ಅಗತ್ಯ 
ಮೇಲಿಂದ ಮೇಲೆ ನಡೆಯುತ್ತಿರುವ ಅಪಘಾತಗಳನ್ನು ತಡೆಯಲು ಎಚ್ಚರಿಕೆ ಫಲಕ, ತಡೆಬೇಲಿ ನ್ಯೂನ್ಯತೆ ಸರಿಪಡಿಸುವುದು ಹಾಗೂ ಸೂಕ್ತ ಎಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next