Advertisement

ಭಾರತ ಬಿಟ್ಟು ತೊಲಗಿ ಚಳವಳಿಯ 75ನೇ ವರ್ಷಾಚರಣೆ

12:09 PM Oct 15, 2017 | |

ಮಂಗಳಗಂಗೋತ್ರಿ: ಭಾರತ ಬಿಟ್ಟು ತೊಲಗಿ ಚಳವಳಿ ಯುವ ಸಮುದಾಯ ಸಹಿತ ಕಾಲೇಜು ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಿದ ಕ್ರಾಂತಿಕಾರಿ ಹೋರಾಟವಾಗಿದ್ದು, ಕರಾವಳಿಯಲ್ಲಿ ಅಮ್ಮೆಂಬಳ ಬಾಳಪ್ಪನಂತಹ ಹಲವಾರು ಯುವ ಸಮುದಾಯ ಈ ಹೋರಾಟದ ಮುಂಚೂಣಿಯಲ್ಲಿದ್ದರು ಎಂದು ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ| ಸುರೇಂದ್ರ ರಾವ್‌ ಅಭಿಪ್ರಾಯಪಟ್ಟರು.

Advertisement

ಭಾರತ ಬಿಟ್ಟು ತೊಲಗಿ ಚಳುವಳಿಯ 75ನೇ ವರ್ಷಾಚರಣೆಯ ಅಂಗವಾಗಿ ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಆಶ್ರಯದಲ್ಲಿ ವಿಶ್ವವಿದ್ಯಾಲಯದ ಹಳೆ ಸೆನೆಟ್‌ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬ್ರಿಟಿಷರ ವಿರುದ್ಧ 1857ರಲ್ಲಿ ನಡೆದ ದಂಗೆಯ ನಂತರ 1942ರ ವರೆಗೂ ಬ್ರಿಟಿಷರ ವಿರುದ್ಧ ಅಂತಹ ಪರಿಣಾಮಕಾರಿ ಹೋರಾಟಗಳು ನಡೆದಿರಲಿಲ್ಲ. ಆದರೆ ಕ್ವಿಟ್‌ ಇಂಡಿಯಾ ಚಳುವಳಿಗೆ ಮಹಾತ್ಮಾ ಗಾಂಧೀಜಿ ಅವರು ಕರೆ ಕೊಟ್ಟ ಬಳಿಕ ಆಗಸ್ಟ್‌ ನಲ್ಲಿ ಆರಂಭವಾದ ಚಳುವಳಿ ಕೇವಲ ಎರಡು ತಿಂಗಳ ಕಾಲವಷ್ಟೇ ನಡೆದರೂ ಸ್ವಾತಂತ್ರ ಹೋರಾಟದಲ್ಲಿ ಹಲವು ಫಲಿತಾಂಶ ತಂದಿತ್ತು ಎಂದರು.

ಭಾರತದಲ್ಲಿ ಸ್ವಾತಂತ್ರದ ಹೋರಾಟವು ಅಹಿಂಸಾತ್ಮಕವಾಗಿ ನಡೆದಿತ್ತು ಎನ್ನುತ್ತಾರೆ. ಆದರೆ ಇದರಲ್ಲಿ ನಡೆದ ಎಲ್ಲ ಹೋರಾಟಗಳು ಅಹಿಂಸಾತ್ಮಕವಾಗಿ ನಡೆದಿರಲಿಲ್ಲ ಎಂಬುದನ್ನು ನಾವು ಚಿಂತನೆ ನಡೆಸಬೇಕಾಗಿದೆ. ಅಲ್ಲದೆ ಸ್ವಾತಂತ್ರ್ಯ ಹೋರಾಟವನ್ನು ನಾವು ಕೇವಲ ವ್ಯಕ್ತಿಗತವಾಗಿ ನೋಡುವ ಬದಲು ಅದೊಂದು ಸಂಘಟಿತವಾದ ಹೋರಾಟವಾಗಿತ್ತು. ಗಾಂಧೀಜಿ ಹೋರಾಟಕ್ಕೆ ಇಳಿದ ಮರುದಿನವೇ ಬಂಧನವಾದರೂ ಅವರ ನಂತರ ಎರಡನೇ ಹಂತದ, ಮೂರನೇ ಹಂತದ ನಾಯಕರು ಮುಂಚೂಣಿಯಲ್ಲಿದ್ದು ಹೋರಾಟ ಮುಂದುವರಿಯಿತು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ| ಉದಯ ಬಾರ್ಕೂರ್  ಪ್ರಾಸ್ತಾವಿಕ ಮಾತುಗಳನ್ನಾಡಿದರು.ವಿದ್ಯಾರ್ಥಿ ಹನುಮಂತಪ್ಪ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next