Advertisement

ಗೋವಾ ನೂತನ ರಾಜಭವನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶಂಕುಸ್ಥಾಪನೆ

03:04 PM Jun 15, 2022 | Team Udayavani |

ಪಣಜಿ: ಇಂದಿನಿಂದ ರಾಷ್ಟ್ರಪತಿಗಳ ಕಾರ್ಯಕ್ರಮಗಳಲ್ಲಿ ಸಾಂವಿಧಾನಿಕ ಮತ್ತು ಕಾನೂನು ಬದಲಾವಣೆಗಳಿವೆ. ಇದೊಂದು ಶುಭ ಸಂದರ್ಭ, ನಮ್ಮ ರಾಜಭವನವು ರಾಷ್ಟ್ರೀಯ ಸ್ಮಾರಕವಾಗಿದೆ ಎಂದು ಗೋವಾ ರಾಜ್ಯಪಾಲ ಪಿಎಸ್ ಶ್ರೀಧರನ್ ಪಿಳ್ಳೆ ಹೇಳಿದರು.

Advertisement

ರಾಷ್ಟ್ರಪತಿ ರಾಮನಾಥ ಕೋವಿಂದ್ ರವರು ಬುಧವಾರ ಗೋವಾದ ದೋನಾಪಾಲುವ ರಾಜಭವನದ ಸಮೀಪ ನೂತನ ರಾಜಭವನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ನೂತನ ರಾಜಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ ರವರಿಗೆ ಗೋವಾ ರಾಜ್ಯಪಾಲ ಪಿ.ಎಸ್ ಶ್ರೀಧರನ್ ಪಿಳ್ಳೆ ಧನ್ಯವಾದ ಹೇಳಿದರು. ಸದ್ಯದ ವಿಲಕ್ಷಣ ಸನ್ನಿವೇಶದಿಂದಾಗಿ ರಾಷ್ಟ್ರಪತಿಗಳು ಇಂದು ಭಾಷಣ ಮಾಡುವುದಿಲ್ಲ ಎಂದು ರಾಜ್ಯಪಾಲರು ಹೇಳಿದರು.

ಗೋವಾ ರಾಜಭವನವು ರಾಷ್ಟ್ರೀಯ ಸ್ಮಾರಕವಾಗಿ ಘೋಷಣೆಯಾಗಿದೆ. ಆದರೆ ಸದ್ಯ ಭದ್ರತೆ ಮತ್ತು ಇತರ ಕೆಲ ಕಾರಣಗಳಿಂದಾಗಿ ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಲಭಿಸುತ್ತಿಲ್ಲ. ಗೋವಾ ರಾಜಭವನವು 450 ವರ್ಷಗಳಷ್ಟು ಹಳೆಯದಾಗಿದೆ. ಇದರಿಂದಾಗಿ ಹೊಸ ರಾಜಭವನ ನಿರ್ಮಾಣಕ್ಕೆ ಇಂದು ಚಾಲನೆ ದೊರೆತಿದೆ. ಹಳೇಯ ರಾಜಭವನವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಗಿರುವುದರಿಂದ ಹೊಸ ರಾಜಭವನ ನಿರ್ಮಾಣಗೊಂಡ ನಂತರವೂ ಹಳೆಯ ರಾಜಭವನವನ್ನು ಕೆಡವಿಹಾಕಲು ಅಥವಾ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ  ಎಂದು ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ ಹೇಳಿದರು.

Advertisement

ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್, ಕೇಂದ್ರ ಪ್ರವಾಸೋದ್ಯಮ ರಾಜ್ಯ ಸಚಿವ ಶ್ರೀಪಾದ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next