Advertisement

Chikkamagaluru: ಏರ್ ಗನ್ ನಲ್ಲಿ ಆಕಸ್ಮಿಕವಾಗಿ ಶೂಟ್ ಆಗಿ 7 ವರ್ಷದ ಬಾಲಕ ಮೃತ್ಯು

12:16 AM Apr 12, 2024 | Team Udayavani |

ಚಿಕ್ಕಮಗಳೂರು: ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಾಲಕ ವಿಷ್ಣು (7) ಎಂಬ ಬಾಲಕ ಏರ್ ಗನ್ ನಲ್ಲಿ ಆಕಸ್ಮಿಕವಾಗಿ ಶೂಟ್ ಆಗಿ ಮೃತಪಟ್ಟಿರುವ ಘಟನೆ ನಡೆದಿದೆ.

Advertisement

ಮಲ್ಲೇನಹಳ್ಳಿ ಗ್ರಾಮದ ಹಕ್ಕಿಪಿಕ್ಕಿ ಜನಾಂಗದ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಗಳನ್ನು ಓಡಿಸಲು ಮನೆಯಲ್ಲಿ ಏರ್ ಗನ್ ಇಟ್ಟಿದ್ದು, ಮಕ್ಕಳು‌ ಆಟವಾಡು ವಾಗ ಗನ್ ತಗೆದುಕೊಂಡ ಸಂದರ್ಭದಲ್ಲಿ ಮಿಸ್ ಫೈರ್ ಆಗಿ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಅಥವಾ ಬೇರೆ ಕಾರಣದಿಂದ ಬಂದೂಕಿನಿಂದ ಫೈರ್ ಆಗಿರಬಹುದೆಂದು‌ ಹೇಳಲಾಗುತ್ತದೆ. ಒಟ್ಟಾರೆ ಮನೆಯವರ ನಿರ್ಲಕ್ಷತನದಿಂದ ಬಾಲಕ ಮೃತಪಟ್ಟಿದ್ದು, ಮೃತ ಬಾಲಕನ ಸಂಬಂಧಿ ನೀಡಿರುವ ದೂರಿನ ಆಧಾರದ ಮೇಲೆ ದೂರು ದಾಖಲಾಗಿದೆ. ಬಾಲಕನ. ಸಾವಿಗೆ ಕಾರಣವೇನೆಂದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next