Advertisement

ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ವಿರುದ್ಧ ತರೂರ್‌ ಮಾನಹಾನಿ ದಾವೆ

04:01 PM Dec 11, 2018 | Team Udayavani |

ತಿರುವನಂತಪುರ : ಪತ್ನಿ ಸುನಂದಾ ಪುಷ್ಕರ್‌ ಸಾವಿನ ಬಗ್ಗೆ ಅವಮಾನಕಾರಿ ಹೇಳಿಕೆ ನೀಡಿರುವರೆನ್ನಲಾದ  ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ವಿರುದ್ಧ ಹಿರಿಯ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಮಾನಹಾನಿ ದಾವೆಯನ್ನು ಹೂಡಿದ್ದಾರೆ.

Advertisement

ಕೇಂದ್ರ ಕಾನೂನು ಮತ್ತು ಐಟಿ ಸಚಿವರಾಗಿರುವ ಪ್ರಸಾದ್‌ ಅವರು ತರೂರ್‌ ಅವರನ್ನು “ಕೊಲೆ ಆರೋಪಿ’ ಎಂದು ಕೆರೆದಿದ್ದರು. ಈ ಹೇಳಿಕೆಗೆ ನಿಶ್ಶರ್ತ ಕ್ಷಮೆಯಾಚಿಸುವಂತೆ ತರೂರ್‌ ಅವರು ಪ್ರಸಾದ್‌ ಅವರಿಗೆ ಈ ಮೊದಲು ಲೀಗಲ್‌ ನೊಟೀಸ್‌ ಕಳುಹಿಸಿದ್ದರು. 

ಸಚಿವ ಪ್ರಸಾದ್‌ ವಿರುದ್ಧ ಶಶಿ ತರೂರ್‌ ಅವರು ತಿರುವನಂತಪುರ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next