Advertisement

ರಜೌರಿಯಲ್ಲಿ  ಬಿಎಸ್‌ಎಫ್ ಗುಂಡಿಗೆ ಉಗ್ರ ಬಲಿ ;ಇಬ್ಬರು ಪರಾರಿ

11:58 AM Feb 21, 2017 | |

 ಶ್ರೀನಗರ: ಇಲ್ಲಿನ ರಜೌರಿ ಜಿಲ್ಲೆಯ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ  ಗಡಿನುಸುಳಲು ಯತ್ನಿಸುತ್ತಿದ್ದ ಉಗ್ರನೊಬ್ಬನನ್ನು ಮಂಗಳವಾರ ನಸುಕಿನ ವೇಳೆ ಬಿಎಸ್‌ಎಫ್ ಪಡೆಗಳು ಹತ್ಯೆಗೈದಿವೆ. 

Advertisement

ಉಗ್ರರು ಮತ್ತು 163 ಬೆಟಾಲಿಯನ್‌ ಸೇನಾ ಪಡೆಗ ನಡುವೆ  1 ಗಂಟೆಗೂ ಹೆಚ್ಚು ಕಾಲ ಭಾರೀ ಗುಂಡಿನ ಕಾಳಗ ನಡೆದಿದ್ದು ಓರ್ವನ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಹತ ಉಗ್ರನ ಬಳಿಯಿದ್ದ ಎಕೆ47 ಗನ್‌ ಮತ್ತು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. 

ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು  ಉಗ್ರರು ನುಸುಳಲು ಸಾಧ್ಯವಾಗದಂತೆ ಭಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next