Advertisement

ಎಲ್‌ಒಸಿಯಲ್ಲಿ ಉಗ್ರರ ಜಮಾವಣೆ

11:47 PM Aug 06, 2019 | Lakshmi GovindaRaj |

ಕಳೆದ ಕೆಲವು ದಿನಗಳಿಂದ ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಭಯೋತ್ಪಾದಕರನ್ನು ನಿಯೋಜಿಸುತ್ತಿದ್ದು, ಭಾರತದೊಳಕ್ಕೆ ನುಸುಳಿಸಲು ಯತ್ನಿಸುತ್ತಿದೆ ಎಂದು ಭಾರತೀಯ ಸೇನೆ ಹೇಳಿದೆ. ಮಂಗಳವಾರ ಶ್ರೀನಗರದಲ್ಲಿ ಸೇನೆಯ ಪ್ರಮುಖ ಕಮಾಂಡರ್‌ಗಳ ಸಭೆ ನಡೆದಿದ್ದು, ಸಭೆ ಬಳಿಕ ನಾರ್ದರ್ನ್ ಕಮಾಂಡ್‌ನ‌ ಜನರಲ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್ ಲೆ.ಜ. ರಣಬೀರ್‌ ಸಿಂಗ್‌ ಈ ವಿಚಾರ ತಿಳಿಸಿದ್ದಾರೆ.

Advertisement

ಪಾಕಿಸ್ತಾನವೇನಾ ದರೂ ದುಸ್ಸಾಹಸಕ್ಕೆ ಮುಂದಾದರೆ, ತಕ್ಕ ಪ್ರತ್ಯುತ್ತರ ನೀಡಲಾಗುತ್ತದೆ. ಅದಕ್ಕೆ ಅವರು ಭಾರೀ ಬೆಲೆ ತೆರಬೇಕಾದೀತು ಎಂದೂ ಅವರು ಪಾಕ್‌ಗೆ ಎಚ್ಚರಿಸಿದ್ದಾರೆ. ಜತೆಗೆ, ಶಾಂತಿ ಮತ್ತು ಭದ್ರತೆ ಕಾಪಾಡಲು ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವುದೇ ಸನ್ನಿವೇಶವನ್ನು ಎದುರಿಸಲೂ ನಾವು ಸನ್ನದ್ಧರಾಗಿದ್ದೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next