Advertisement

ಜಮ್ಮು ಕಾಶ್ಮೀರದಲ್ಲಿ ಭಾರಿ ಹಿಮಪಾತ : ಮಕ್ಕಳು, ಮಹಿಳೆಯರು ಸೇರಿ ಹನ್ನೊಂದು ಮಂದಿಯ ರಕ್ಷಣೆ

05:39 PM Nov 16, 2020 | sudhir |

ಶ್ರೀನಗರ : ಕಳೆದ ಕೆಲವು ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ ಬಾರಿ ಹಿಮಪಾತವಾಗುತ್ತಿದ್ದು ರವಿವಾರ ರಾತ್ರಿ ಮಕ್ಕಳು, ಇಬ್ಬರು ಮಹಿಳೆಯರು ಸೇರಿ ಹನ್ನೊಂದು ಮಂದಿ ಹಿಮಪಾತದಿಂದ ಸಿಲುಕಿಕೊಂಡಿದ್ದು ಭಾರತೀಯ ಸೇನೆ ಮತ್ತು ಪೊಲೀಸ್ ಅಧಿಕಾರಿಗಳ ತಂಡ ರಕ್ಷಣೆ ಮಾಡಿದೆ.

Advertisement

ಹಿಮಪಾತದಿಂದ ರಸ್ತೆಗಳು ಮುಚ್ಚಿದ್ದು ಸಂಚಾರ ದುಸ್ತರವಾಗಿದೆ ಅಲ್ಲದೆ ಜಮ್ಮು ಕಾಶ್ಮೀರದ ಕಿಸ್ತ್ವಾರ ಜಿಲ್ಲೆಯ ಸಿಂಥಾನ್ ಪ್ರದೇಶದಲ್ಲಿ ಹನ್ನೊಂದು ಮಂದಿ ಹಿಮಪಾತದಲ್ಲಿ ಸಿಲುಕಿಕೊಂಡ ವಿಚಾರ ಬೆಳಕಿಗೆ ಬಂದಿದ್ದು ಕೂಡಲೇ ಸೇನಾಪಡೆ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ರಾಷ್ಟ್ರೀಯ ಹೆದ್ದಾರಿ 244ರಲ್ಲಿ ಸುಮಾರು ಐದು ಗಂಟೆಗಳ ಕಾಲ ನಡೆದು ಹೋಗಿ ಅಲ್ಲಿ ಸಿಲುಕಿದ ತಂಡವನ್ನು ರಕ್ಷಣೆ ಮಾಡಿದೆ ಅಲ್ಲದೆ ಅವರಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ.

ಇದನ್ನೂ ಓದಿ:ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಸ್ಪರ್ಧೆ ಅನುಮಾನ: ಡಿ ಕೆ ಶಿವಕುಮಾರ್ ಹೇಳಿದ್ದೇನು?

ರವಿವಾರ ರಾತ್ರಿ ಭಾರತೀಯ ಸೇನೆ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಹಿಮಪಾತದಿಂದ ರಸ್ತೆಗಳು ಸರಿಯಾಗಿ ಕಾಣದ ಹೊರತಾಗಿಯೂ ಸುಮಾರು ಐದು ಕಿಲೋಮೀಟರ್ ನಡೆದು ಹೋಗಿ ರಕ್ಷಣೆ ಕಾರ್ಯ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next