Advertisement

JDS ಚಿಹ್ನೆ, ಲೋಗೋ ಬಳಸದಂತೆ ಇಬ್ರಾಹಿಂಗೆ ತಾತ್ಕಾಲಿಕ ತಡೆಯಾಜ್ಞೆ

10:36 PM Jan 20, 2024 | Team Udayavani |

ಬೆಂಗಳೂರು: ಕರ್ನಾಟಕ ಪ್ರದೇಶ ಜಾತ್ಯತೀತ ಜನತಾದಳದ ಚಿಹ್ನೆ ಹಾಗೂ ಲೆಟರ್‌ ಹೆಡ್‌ ಬಳಸದಂತೆ ಮತ್ತು ಪಕ್ಷದ ಕುರಿತಾಗಿ ಮಾಧ್ಯಮ ಹೇಳಿಕೆ ನೀಡದಂತೆ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರಿಗೆ ನ್ಯಾಯಾಲಯ ತಾತ್ಕಾಲಿಕ ಮಧ್ಯಾಂತರ ನಿರ್ಬಂಧ ಹೇರಿದೆ.

Advertisement

ಪಕ್ಷದ ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ್‌ ಅವರು, ಇಬ್ರಾಹಿಂ ಸೇರಿ ಅವರ ಪದಾಧಿಕಾರಿಗಳ ನೇಮಕವನ್ನು ಅಮಾನ್ಯ ಮಾಡಬೇಕು. ಜಾತ್ಯತೀತ ಜನತಾದಳದ ಚಿಹ್ನೆ, ಲೆಟರ್‌ ಹೆಡ್‌, ಲೋಗೊ ಮತ್ತು ಪಕ್ಷದ ಪರ ಪ್ರತಿನಿಧಿಸುವಿಕೆಗೆ ಶಾಶ್ವತ ನಿರ್ಬಂಧ ಹೇರಬೇಕು. ಇಬ್ರಾಹಿಂ ಪಕ್ಷದ ಅಧ್ಯಕತೆಯನ್ನು ನಿರ್ವಹಿಸುವುದು ಮತ್ತು ಪಕ್ಷದೊಂದಿಗೆ ಗುರುತಿಸಿಕೊಳ್ಳುವುದಕ್ಕೆ ತಡೆ ನೀಡಬೇಕು ಎಂದು ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಸಿಸಿಎಚ್‌5 ಒಂಬತ್ತನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಧೀಶರು, ಮುಂದಿನ ವಿಚಾರಣೆಯವರೆಗೆ ತಾತ್ಕಾಲಿಕ ನಿರ್ಬಂಧ ಜಾರಿಗೊಳಿಸಿದ್ದಾರೆ. ಹಾಗೆಯೇ ಇಬ್ರಾಹಿಂ ಸಹಿತ ಅವರು ನೇಮಿಸಿದ ಪದಾಧಿಕಾರಿಗಳಿಗೆ ನೋಟಿಸ್‌ ಜಾರಿಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next