Advertisement

ದೇವಾಲಯಗಳಿಗೆ ಸ್ವಾತಂತ್ರ್ಯಕ್ಕಿಂತ ಸ್ವಾಯತ್ತತೆ ನೀಡಬೇಕು: ಶಶಿಕಲಾ ಜೊಲ್ಲೆ

04:34 PM Feb 24, 2022 | Team Udayavani |

ಬೆಂಗಳೂರು: ದೇವಾಲಯಗಳಿಗೆ ಸ್ವಾತಂತ್ರ್ಯಕ್ಕಿಂತ ಸ್ವಾಯತ್ತತೆ ನೀಡಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಗುರುವಾರ ಹೇಳಿದ್ದಾರೆ.

Advertisement

ಬಿಜೆಪಿ ಕಚೇರಿಯಲ್ಲಿ ಸುದಿಗಾರರೊಂದಿಗೆ ಮಾತನಾಡಿದ ಅವರು,ಇಂದು ಬಿಜೆಪಿ ನೇತೃತ್ವದಲ್ಲಿ ಸರ್ಕಾರ ಉತ್ತಮ‌ ರೀತಿ‌ ಯೋಜನೆ ಹಮ್ಮಿಕೊಂಡಿದೆ.ಕೋವಿಡ್ ಸಂಕಷ್ಟದಲ್ಲಿ ಉತ್ತಮ ಕೆಲಸ ಮಾಡಲಾಗ್ತಿದೆ. ಜನರಿಗೆ, ಪಕ್ಷದ ಕಾರ್ಯಕರ್ತರಿಗೆ ಸ್ಪಂದಿಸುವ ಕೆಲಸ ಆಗಬೇಕು. ಪ್ರತೀ ಸಚಿವರು ಪಕ್ಷದ ಕಚೇರಿಗೆ ಬಂದು ಸಮಸ್ಯೆ ಆಲಿಸಲಾಗುತ್ತಿದೆ.ಪಕ್ಷದ ಕಚೇರಿಗೆ ಬಂದು ಈ ಭಾಗದ ಜನರ ಸಮಸ್ಯೆ ಆಲಿಸಿದ್ದೇನೆ.ನನ್ನ ಇಲಾಖೆಗೆ ಬರುವ ದೇವಸ್ಥಾನಗಳ ದೂರುಗಳ ನಿರ್ವಹಣೆ ಮಾಡುವ ಕೆಲಸ ಮಾಡಲಾಗಿದೆ.ಬಿಜೆಪಿ ಇಂದ ಪ್ರತಿಯೊಬ್ಬ ಸಚಿವರು ಜನ ಸಾಮಾನ್ಯರಿಗೆ ಸಿಗಬೇಕು ರೀತಿಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದರು.

ಆಂಜನೇಯ ಜನ್ಮಸ್ಥಳ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ಈಗಾಗಲೇ ಸಿಎಂ‌ ಜೊತೆ ಚರ್ಚೆ ಮಾಡಿದ್ದೇನೆ. ರಾಜ್ಯಕ್ಕೆ ಅವರೇ ವಿಚಾರ ತಿಳಿಸ್ತಾರೆ. ಅಂಜನಾದ್ರಿ ಪರ್ವತ ಅಭಿವೃದ್ಧಿಗೆ ಸಿಎಂ ಪಣ ತೊಟ್ಟಿದ್ದಾರೆ.ಕೆಲವೇ ದಿನಗಳಲ್ಲಿ ಸಿಎಂ ಈ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದರು.

ದೇವಸ್ಥಾನಗಳಿಗೆ ಸ್ವಾತಂತ್ರ್ಯಕ್ಕಿಂತ ಸ್ವಾಯತ್ತತೆ ನೀಡಬೇಕು ಈ ಬಗ್ಗೆ ಮಾತನಾಡ ಬೇಕು ಅಂದ್ರೆ, ಬೇರೆ ರಾಜ್ಯಗಳಲ್ಲಿ ದೇವಸ್ಥಾನದಲ್ಲಿ ಹೇಗಿದೆ ಅನ್ನೋ ವರದಿ ಪಡೆಯಲಾಗ್ತಿದೆ‌ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next