Advertisement

ತೆಲಂಗಾಣ ಮಾದರಿ ಮರಳು ನೀತಿ ಜಾರಿ

01:56 AM May 23, 2020 | Sriram |

ಉಡುಪಿ: ಕರಾವಳಿಯ ಮೂರು ಜಿಲ್ಲೆಗಳ ನಾನ್‌ ಸಿಆರ್‌ಝಡ್‌ ವಲಯ ಸಹಿತ ರಾಜ್ಯಾದ್ಯಂತ ತೆಲಂಗಾಣ ಮಾದರಿ ಏಕರೂಪದ ಹೊಸ ಮರಳು ನೀತಿ 2020 ಜಾರಿಗೊಳಿಸಲಾಗಿದೆ.

Advertisement

ಜನರಿಗೆ ಕಡಿಮೆ ದರದಲ್ಲಿ ಸುಲಭ ಮತ್ತು ಪಾರದರ್ಶಕವಾಗಿ ಮರಳು ದೊರಕುವಂತೆ ರಾಜ್ಯ ಸರಕಾರ ಈ ಹೊಸ ಮರಳು ನೀತಿ ಜಾರಿಗೊಳಿಸಿದೆ. ಇದರನ್ವಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾಂಪ್ರ ದಾಯಿಕ ಮರಳುಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. ನದಿ, ಅಣೆಕಟ್ಟುಗಳ ಹಿನ್ನೀರಿನ ಪ್ರದೇಶಗಳಲ್ಲಿ ಇರುವ ಮರಳು ನಿಕ್ಷೇಪಗಳ ನಿರ್ವಹಣೆಯನ್ನು ಸರಕಾರಿ ಸ್ವಾಮ್ಯದ ಕರ್ನಾಟಕ ಸ್ಟೇಟ್‌ ಮಿನರಲ್‌ ಕಾರ್ಪೊರೇಶನ್‌ ನಡೆಸಲಿದೆ. ಬೆಳಗಾವಿ ಕಂದಾಯ ವಿಭಾಗ(ಬಳ್ಳಾರಿ ಹೊರತುಪಡಿಸಿ)ದಲ್ಲಿ ಹಟ್ಟಿ ಚಿನ್ನದ ಗಣಿ ನಿ. ಮರಳುಗಾರಿಕೆ ನಡೆಸಲಿದೆ.

ದರ ನಿಗದಿ ಹೇಗೆ?
ಎಲ್ಲ ಜಿಲ್ಲೆಗಳಲ್ಲಿ ಏಕರೂಪದ ಮರಳು ದರ ನಿಗದಿಯಾಗಿದ್ದು, ಹಳ್ಳ, ತೊರೆ, ಕೆರೆಗಳಲ್ಲಿ ಗ್ರಾ.ಪಂ. ಮೂಲಕ ವಿತರಿಸುವ 1 ಮೆ.ಟನ್‌ ಮರಳಿಗೆ 350 ರೂ., ಹೊಳೆ, ನದಿ, ಅಣೆಕಟ್ಟು, ಜಲಾಶಯ, ಬ್ಯಾರೇಜ್‌, ಅಣೆಕಟ್ಟುಗಳ ಹಿನ್ನೀರಿನ ನದಿ ಪಾತ್ರದ ಪ್ರದೇಶಗಳ ಒಂದು ಮೆ.ಟನ್‌ ಮರಳಿಗೆ 700 ರೂ. ದರ ನಿಗದಿಪಡಿಸಲಾಗಿದೆ.

ಅನಧಿಕೃತ ಮರಳುಗಾರಿಕೆಗೆ ಬ್ರೇಕ್‌!
ಮರಳನ್ನು ಆಯಾ ತಾಲೂಕು ವ್ಯಾಪ್ತಿಯ ಗ್ರಾಮ ಗಳ ಸಾರ್ವ ಜನಿಕ ಮತ್ತು ಸರಕಾರಿ ಕಾಮಗಾರಿಗಳಿ ಗಾಗಿ ಲಘು ವಾಹನ ಗಳಲ್ಲಿ ಮಾತ್ರ ಸಾಗಿಸಲು ಅವಕಾಶ ಇದೆ. ಕರ್ನಾಟಕ ಸ್ಟೇಟ್‌ ಮಿನರಲ್‌ ಕಾರ್ಪೊರೇಶನ್‌ ಲಿ. ಮತ್ತು ಹಟ್ಟಿ ಚಿನ್ನದ ಗಣಿ ಲಿ. ತೆಗೆದ ಮರಳು ರಾಜ್ಯಾ ದ್ಯಂತ ಸಾಗಣೆಗೆ ಅವಕಾಶ ಇದೆ. ಗ್ರಾಹಕರು ಮರಳು ಮಿತ್ರ ಆ್ಯಪ್‌ ಮೂಲಕ ಬುಕ್ಕಿಂಗ್‌ ಮಾಡ ಬಹುದು. ಹೊರ ರಾಜ್ಯಗಳಿಂದ ಮರಳು ಸಾಗಿಸುವ ವಾಹನಗಳಿಗೆ ನಿಯಂತ್ರಣ ಶುಲ್ಕ ವಿಧಿಸಲು ಅವಕಾಶವಿದೆ. ಕೇಂದ್ರೀಯ ಜಿಪಿಎಸ್‌ ಟ್ರ್ಯಾಕಿಂಗ್‌ ವ್ಯವಸ್ಥೆಯ ಮೂಲಕ ಮರಳು ಸಾಗಣೆ ಮೇಲೆ ನಿಗಾ ಇರಿಸಲಾಗುತ್ತದೆ. ಅನಧಿಕೃತ ಗಣಿ ಚಟುವಟಿಕೆ ನಿಯಂತ್ರಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧೀನದಲ್ಲಿ ಖನಿಜ ರಕ್ಷಣಾ ಪಡೆ ಸ್ಥಾಪಿಸಲಾಗುತ್ತದೆ. ಇದಕ್ಕೆ ಮಾಜಿ ಸೈನ್ಯಾಧಿಕಾರಿ ಮುಖ್ಯಸ್ಥರಾಗಿರುತ್ತಾರೆ.

ಸಮಿತಿ ರಚನೆ
ಜಿಲ್ಲಾಧಿಕಾರಿ ಅಧ್ಯಕ್ಷತೆಯ ಮರಳು ಸಮಿತಿ ಇರುತ್ತದೆ. ಜಿ.ಪಂ. ಸಿಇಒ, ಎಸ್ಪಿ, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಎಂಜಿನಿಯರ್‌, ಜಲಸಂಪನ್ಮೂಲ ಇಲಾಖೆ ಎಂಜಿನಿಯರ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ, ಪರಿಸರ ಅಧಿಕಾರಿ, ಜಿಲ್ಲೆಯ ಎಲ್ಲ ಉಪವಿಭಾಗದ ವಿಭಾಗಾಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳು ಸದಸ್ಯರಾಗಿ ಇರಲಿದ್ದು, ಭೂವಿಜ್ಞಾನಿಗಳು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ತಾಲೂಕು ಮಟ್ಟದ ಮರಳು ಸಮಿತಿಗೆ ಕಂದಾಯ ವಿಭಾಗದ ಅಧಿಕಾರಿ ಅಧ್ಯಕ್ಷತೆ ವಹಿಸಲಿದ್ದಾರೆ.

Advertisement

ಪರವಾನಿಗೆ ನವೀಕರಣವಿಲ್ಲ!
ಹೊಸ ಮರಳು ನೀತಿಯನ್ನು ಕರಾವಳಿಯಲ್ಲಿ ಕರ್ನಾಟಕ ಸ್ಟೇಟ್‌ ಮಿನರಲ್‌ ಕಾರ್ಪೋರೇಷನ್‌ ಲಿ. ಪ್ರಾರಂಭಿಸಲಿದೆ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 2 ಕಡೆಯಲ್ಲಿ ಮರಳು ಗಣಿಗಾರಿಕೆಗೆ 5 ವರ್ಷಗಳ ಕಾಲ ಗುತ್ತಿಗೆ ನೀಡಿದ್ದು, ಅವರು ಅವಧಿ ಮುಗಿಯುವ ವರೆಗೆ ಮರಳು ಮಿತ್ರ ಆ್ಯಪ್‌ ಮೂಲಕ ಮರಳು ವಿತರಿಸಬೇಕಿದೆ.

ಹೇಗೆ ಗುರುತಿಸುವಿಕೆ?
ತಹಶೀಲ್ದಾರ್‌ ನೇತೃತ್ವದಲ್ಲಿ ಪಿಡಬ್ಯುಡಿ, ಅಂತರ್ಜಲ ಇಲಾಖೆ, ಅರಣ್ಯ ಇಲಾಖೆ, ಪಿಡಿಒ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಅಧಿಕಾರಿಗಳ ತಂಡದಿಂದ ಜಂಟಿ ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾ ಮರಳು ಸಮಿತಿಗೆ ವರದಿ ಸಲ್ಲಿಸಬೇಕಿದೆ. ಇದರ ಆಧಾರದಲ್ಲಿ ಸಾಂಪ್ರದಾಯಿಕವಾಗಿ ಮರಳು ತೆಗೆಯಲು ಗ್ರಾ.ಪಂ.ಗಳಿಗೆ ಅನುಮತಿ ಸಿಗಲಿದೆ.

ಜಿಲ್ಲೆಯ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಈ ಹಿಂದಿನಂತೆ ಮುಂದುವರಿಯಲಿದೆ. ನಾನ್‌ ಸಿಆರ್‌ಝಡ್‌ನಲ್ಲಿ 24 ಕಡೆಯಲ್ಲಿ 2.20 ಲಕ್ಷ ಮೆ. ಟನ್‌ ಮರಳು ಇದೆ. ಹೊಸ ನೀತಿ ಅನ್ವಯ ಕೆರೆ, ತೊರೆಗಳಲ್ಲಿ ಇರುವ ಮರಳು ದಿಬ್ಬ ತೆರವು ಗೊಳಿಸಲು ಅವಕಾಶವಿದೆ. ಜಿಲ್ಲೆಯ ಜನರಿಗೆ ಕಡಿಮೆ ದರದಲ್ಲಿ ಉತ್ತಮ ಮರಳು ಸಿಗಲಿದೆ.
-ಜಿ. ಜಗದೀಶ್‌, ಉಡುಪಿ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next