Advertisement

ಬಿಜೆಪಿ ವಿರುದ್ಧ ಹೋರಾಟ: ಚಂದ್ರಶೇಖರ್‌ಗೆ ಉದ್ಧವ್‌ ಬೆಂಬಲ

09:33 PM Feb 16, 2022 | Team Udayavani |

ಹೈದರಾಬಾದ್‌: ತೆಲಂಗಾಣದ ಮುಖ್ಯಮಂತ್ರಿ, ಟಿಆರ್‌ಎಸ್‌ ನಾಯಕ ಕೆ.ಚಂದ್ರಶೇಖರ್‌ ರಾವ್‌ ಅವರ ಬಿಜೆಪಿ ವಿರುದ್ಧದ ಹೋರಾಟಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನಾ ನಾಯಕ ಉದ್ಧವ್‌ ಠಾಕ್ರೆ ಪೂರ್ಣ ಬೆಂಬಲ ನೀಡಿದ್ದಾರೆ.

Advertisement

ಬಿಜೆಪಿಯ ಜನವಿರೋಧಿ ನೀತಿಯ ವಿರುದ್ಧ ಹೋರಾಡಲು ತನಗೆ ಬೆಂಬಲ ನೀಡಬೇಕೆಂದು ಚಂದ್ರಶೇಖರ್‌ ರಾವ್‌ ಕೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ತಾವೇ ಖುದ್ದಾಗಿ ಕರೆ ಮಾಡಿದ ಉದ್ಧವ್‌, ಜನರನ್ನು ಬೇರೆಬೇರೆ ಮಾಡುವ ಬಿಜೆಪಿ ನೀತಿಗಳ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿರುವುದು ಸಕಾಲಿಕ, ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯನ್ನು ಎತ್ತಿಹಿಡಿಯಬೇಕಾದರೆ ಇದು ಅಗತ್ಯ ಎಂದಿದ್ದಾರೆ.

ಇದನ್ನೂ ಓದಿ:2 ತಿಂಗಳಲ್ಲಿ 4ನೇ ಬಾರಿ ವಿಮಾನ ಇಂಧನ ಬೆಲೆಯೇರಿಕೆ!

ಹಾಗೆಯೇ ಮುಂಬೈಗೆ ಚಂದ್ರಶೇಖರ್‌ರನ್ನು ಆಹ್ವಾನಿಸಿದ್ದಾರೆ, ಅಲ್ಲೇ ಮುಂದಿನ ಹೋರಾಟದ ಮಾರ್ಗವನ್ನು ನಿರ್ಧರಿಸುವುದಾಗಿ ಉದ್ಧವ್‌ ತಿಳಿಸಿದ್ದಾರೆ. ಇದಕ್ಕೂ ಮುನ್ನ ಮಾಜಿ ಪ್ರಧಾನಿ ದೇವೇಗೌಡರು ಕೂಡ, ಚಂದ್ರಶೇಖರ್‌ಗೆ ಬೆಂಬಲ ನೀಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next