Advertisement

ವಾರಾಣಸಿಗೆ ತೆರಳಿದ ಲಾಲು ಪುತ್ರ ತೇಜಸ್ವಿ?

10:59 AM Nov 09, 2018 | Team Udayavani |

ಪಟ್ನಾ: ಪತ್ನಿಯಿಂದ ವಿಚ್ಛೇದನ ಬಯಸಿರುವ ಆರ್‌ಜೆಡಿ ನಾಯಕ ತೇಜ್‌ಪ್ರತಾಪ್‌ ಯಾದವ್‌ ಇದುವರೆಗೆ ಮನೆಗೆ ಮರಳಿಲ್ಲ ಎಂದು ಹೇಳಲಾಗಿದೆ. ಈ ಬೆಳವಣಿಗೆ ಕುಟುಂಬದ  ಸದಸ್ಯರಲ್ಲಿ ಆತಂಕ ಮೂಡಿಸಿದೆ. ಅವರ ಸಹೋದರಿ ಮಿಸಾ ಭಾರತಿ ಮಾಹಿತಿ ನೀಡಿರುವ ಪ್ರಕಾರ “ಸಹೋದರ ವಾರಾಣಸಿಗೆ ತೆರಳಿರುವ ಸಾಧ್ಯತೆ ಇದೆ. 

Advertisement

ಅವರು ಅಲ್ಲಿ ವಿಚ್ಛೇದನ ಬಯಸುವ ನಿರ್ಧಾರದ ಬಗ್ಗೆ ಮತ್ತೂಮ್ಮೆ ನಿರ್ಧಾರ ಕೈಗೊಳ್ಳುತ್ತಿರಬಹುದು’ ಎಂದು ಹೇಳಿದ್ದಾರೆ. ಕುಟುಂಬದಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ. ಎಲ್ಲರೂ ಒಟ್ಟಾಗಿದ್ದೇವೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ವಿಚ್ಛೇದನ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನ.29ರಂದು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next