Advertisement

ಬೆಳೆ ನಷ್ಟ ಸಮೀಕ್ಷೆಗೆ ತಂಡ ರಚನೆ

08:24 AM Aug 11, 2020 | Suhan S |

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯದಿಂದ ಕಾವೇರಿ ನದಿಗೆ ನೀರು ಬಿಟ್ಟ ಹಿನ್ನೆಲೆ ಪ್ರವಾಹದಿಂದ ಹಾನಿಯಾದ ಪ್ರದೇಶಗಳಿಗೆ ಉಪವಿಭಾಗಾಧಿಕಾರಿ ಶಿವಾನಂದ ಮೂರ್ತಿ ಹಾಗೂ ತಹಶೀಲ್ದಾರ್‌ ಎಂ.ವಿ. ರೂಪ ಭೇಟಿ ನೀಡಿ ಪರಿಶೀಲಿಸಿದರು.

Advertisement

ನದಿ ತೀರದ ಜಮೀನುಗಳ ಬೆಳೆ ನಷ್ಟಕ್ಕೆ ಪರಿಹಾರ ನೀಡಲಾಗುತ್ತದೆ. 75 ಸಾವಿರ ಕ್ಯೂಸೆಕ್‌ ನೀರು ನದಿಗೆ ಬಿಟ್ಟಿದ್ದರಿಂದ ಸ್ವಲ್ಪ ಜಮೀನುಗಳು ಮಾತ್ರ ಮುಳುಗಡೆಯಾಗಿದೆ. ಈಗಾಗಲೇ ತಾಲೂಕು ಆಡಳಿತದಿಂದ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಬೆಳೆ ನಷ್ಟದ ಸಮೀಕ್ಷೆ ನಡೆಸಲು ತಂಡ ರಚನೆಯಾಗಿದೆ. ತಾಲೂಕಿನ ಕೆಆರ್‌ಎಸ್‌ ಜಲಾಶಯ, ಬಲಮುರಿ, ಯಡಮುರಿ, ಬೆಳಗೋಳ, ಮೇಳಾಪುರ, ದೊಡ್ಡಪಾಳ್ಯ ಗ್ರಾಮಗಳ ಜಮೀನುಗಳ ಪ್ರವಾಹದ ನೀರು ಬಂದಿರುವ ಸಮೀಕ್ಷೆ ನಡೆಸಲಾಗಿದೆ. ನದಿ ತೀರದ ಪ್ರವಾಸಿ ಪ್ರದೇಶಗಳಾದ ಕಾವೇರಿ ಸಂಗಮ, ಗೋಸಾಯಿ ಘಾಟ್‌, ನಿಮಿಷಾಂಬ, ಪಕ್ಷಿಧಾಮ, ಬಲಮುರಿ, ಯಡಮುರಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ನದಿ ತೀರಕ್ಕೆ ಹೋದ ತಾಯಿ, ಮಗು ಕಾಲು ಜಾರಿ ಮಗು ಕೊಚ್ಚಿಕೊಂಡು ಹೋಗಿದೆ. ತಾಯಿಯನ್ನು ರಕ್ಷಿಸಲಾಗಿದೆ. ಅದನ್ನು ಬಿಟ್ಟಿ ಪ್ರಸ್ತುತ ಇಲ್ಲಿವರೆಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ. ಬೆಳೆ ನಷ್ಟ ಪರಿಹಾರಕ್ಕೆ ಸರ್ಕಾರಕ್ಕೆ ಈಗಾಗಲೇ ವರದಿ ತಯಾರಿಸಲಾಗಿದೆ. ವರದಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ನಷ್ಟಗೊಳ ಗಾದ ರೈತರಿಗೆ ಸಮೀಕ್ಷೆಯಂತೆ ಪರಿಹಾರ ನೀಡ ಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ಹಾಗೂ ತಹಶೀ ಲ್ದಾರ್‌ ಹೇಳಿದರು. ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next