Advertisement

Rain: 25 ಸಾವಿರ ಎಕರೆ ಬೆಳೆ ನಷ್ಟ ಮಾಹಿತಿ: ಚಲುವರಾಯಸ್ವಾಮಿ

12:47 AM Oct 23, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮಳೆಯಿಂದಾಗಿ 25ರಿಂದ 30 ಸಾವಿರ ಎಕರೆ ಬೆಳೆ ನಷ್ಟವಾಗಿದೆ ಎನ್ನುವ ವರದಿ ಇದ್ದು ಜಮೀನಿಗೆ ನೀರು ನುಗ್ಗಿ ಆಗಿರುವ ಹಾನಿಯ ಬಗ್ಗೆ ವರದಿಯನ್ನು ತಹಶೀಲ್ದಾರರು, ಎ.ಸಿ.ಗಳಿಂದ ಪಡೆದು  ಪರಿಹಾರ ನೀಡಲು ಸೂಚಿಸಿದ್ದೇವೆ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದರು.

Advertisement

ಸುದ್ದಿಗಾರರ ಜತೆಗೆ ಮಾತನಾಡಿ, ಎಲ್ಲ ಡಿಸಿ, ಇಲಾಖೆ ಅಧಿಕಾರಿಗಳಿಗೆ ಸಿಎಂ, ನಾನು ಹಾಗೂ ಕಂದಾಯ ಸಚಿವರು ಸೂಚನೆ ಕೊಟ್ಟಿದ್ದೇವೆ. ಮಳೆಯನ್ನು ನಾವು ನಿಯಂತ್ರಣ ಮಾಡುವುದಕ್ಕೆ ಸಾಧ್ಯವಿಲ್ಲ. ಮಳೆ ಹಾನಿ ಬಗ್ಗೆ ಕೆಲವರು ಟೀಕೆ ಮಾಡುತ್ತಿದ್ದಾ ರೆ. ನಾವು ಬೇಡ ಎನ್ನುವುದಕ್ಕೆ ಸಾಧ್ಯವಿಲ್ಲ. ಮಳೆ ಹೆಚ್ಚಾದಾಗ ಮಾತ್ರ ಈ ರೀತಿ ಆಗುತ್ತದೆ ಎಂದು ಹೇಳಿದರು.

ನಮ್ಮ ಸರಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ. ಪ್ರಕೃತಿ ನಮ್ಮ ಅಧೀನದಲ್ಲಿಲ್ಲ. ಕಳೆದ ವರ್ಷ ಪೂರ್ಣ ಬರಗಾಲವಾಗಿತ್ತು. ಈ ವರ್ಷ ಅದರಿಂದ ಹೊರ ಬಂದಿದ್ದೇವೆ. ರಾಜ್ಯದ ಜಲಾಶಯಗಳೆಲ್ಲ ಭರ್ತಿಯಾಗಿವೆ. ಎಲ್ಲಿ ನೀರಾವರಿ ಇತ್ತೂ ಅಲ್ಲಿ ಅನುಕೂಲ ಆಗುತ್ತಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಚೆನ್ನಾಗಿ ಮಳೆಯಾಗಿ ರೈತರಿಗೆ ಅನುಕೂಲವಾಗಿದೆ. ಇನ್ನೆರಡು ದಿನ ಮಳೆ ಮುಂದುವರಿಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next