Advertisement

ಸೈನಿ, ಠಾಕೂರ್ ದಾಳಿಗೆ ಲಂಕಾ ಕಂಗಾಲು ; ಭಾರತಕ್ಕೆ 2-0 ಸರಣಿ ಜಯ

10:15 AM Jan 11, 2020 | Hari Prasad |

ಪುಣೆ: ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಜಬರ್ದಸ್ತ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ನೇತೃತ್ವದ ಯುವ ಪಡೆ ಶ್ರೀಲಂಕಾ ತಂಡವನ್ನು 78 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿ ಟಿ20 ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.

Advertisement

ಭಾರತ ನೀಡಿದ 201 ರನ್ ಗಳ ಸವಾಲನ್ನು ಬೆನ್ನಟ್ಟಿದ ಮಾಲಿಂಗ ಪಡೆಗೆ ಭಾರತದ ವೇಗಿಗಳು ಪ್ರಾರಂಭದಲ್ಲೇ ಆಘಾತ ನೀಡಿದರು. ಪರಿಣಾಮ ಶ್ರೀಲಂಕಾ ತಂಡದ ಮೊತ್ತ 26 ರನ್ ಗಳಾಗುವಷ್ಟರಲ್ಲಿ ಪ್ರಮುಖ 04 ವಿಕೆಟ್ ಗಳು ಹಾರಿದ್ದವು, ಅದೂ ಕೇವಲ 5.1 ಓವರ್ ಗಳಲ್ಲಿ! ಅಂತಿಮವಾಗಿ ಶ್ರೀಲಂಕಾ 15.5 ಓವರ್ ಗಳಲ್ಲಿ 123 ರನ್ ಗಳಿಗೆ ಆಲೌಟಾಗುವ ಮೂಲಕ 78 ರನ್ ಗಳಿಂದ ಭಾರತಕ್ಕೆ ಶರಣಾಯಿತು.

ಲಂಕಾ ಪರ ಧನಂಜಯ ಡಿ’ಸಿಲ್ವಾ (57) ಅರ್ಧಶತಕ ಬಾರಿಸಿ ಟಾಪ್ ಸ್ಕೋರರ್ ಎಣಿಸಿದರು ಇವರನ್ನು ಹೊರತುಪಡಿಸಿದರೆ ಏಂಜೆಲೋ ಮ್ಯಾಥ್ಯೂಸ್ (31) ಮಾತ್ರವೇ ಎರಡಂಕೆ ಮೊತ್ತವನ್ನು ದಾಖಲಿಸಿದರು.

ಭಾರತದ ಪರ ವೇಗಿಗಳಾದ ನವದೀಪ್ ಸೈನಿ 03 ವಿಕೆಟ್ ಪಡೆದರೆ ಶಾರ್ದೂಲ್ ಠಾಕೂರ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ 02 ವಿಕೆಟ್ ಪಡೆದರು. 2 ಓವರ್ ಗಳಲ್ಲಿ 1 ಓವರ್ ಮೇಡನ್ ಮಾಡಿ ಕೇವಲ 5 ರನ್ ಕೊಟ್ಟ ವೇಗಿ ಜಸ್ಪ್ರೀತ್ ಬುಮ್ರಾ 1 ವಿಕೆಟ್ ಪಡೆದರು.


ಗೌಹಾತಿಯಲ್ಲಿ ನಡೆಯಬೇಕಿದ್ದ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಬಳಿಕ ಇಂಧೋರ್ ನಲ್ಲಿ ನಡೆದ ಎರಡನೇ ಟಿ20 ಯನ್ನು ಭಾರತ 07 ವಿಕೆಟ್ ಗಳಿಂದ ಗೆದ್ದುಕೊಳ್ಳುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಸರಣಿ ಸಮಬಲ ಸಾಧಿಸಲು ಮಾಲಿಂಗ ಪಡೆಗೆ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next