Advertisement

ಕಾವೇರಿಯಲ್ಲಿ ಕೊಚ್ಚಿಹೋದ ಟೆಕ್ಕಿಗಳು

11:44 AM Jul 17, 2018 | |

ಕನಕಪುರ: ತಾಲೂಕಿನ ಪ್ರವಾಸಿ ತಾಣ ಸಂಗಮದ ಮೇಕೆದಾಟು ವೀಕ್ಷಿಸಲು ಬಂದಿದ್ದ ಬೆಂಗಳೂರು ಮೂಲದ
ಇಬ್ಬರು ಸಾಫ್ಟ್ವೇರ್‌ ಇಂಜಿನಿಯರ್‌ಗಳು ಕಾಲು ಜಾರಿ ನದಿಗೆ ಬಿದ್ದು ಕೊಚ್ಚಿಹೋದ ಘಟನೆ ಭಾನುವಾರ ಬೆಳಗ್ಗೆ ಸಂಭವಿಸಿದೆ.

Advertisement

ಮಿಡ್‌ ಕೋ ಎಂಬ ಖಾಸಗಿ ಕಂಪನಿ ಉದ್ಯೋಗಿಗಳಾದ ಶಮೀರ್‌ ರೆಹಮಾನ್‌ (29) ಹಾಗೂ ಭವಾನಿ ಶಂಕರ್‌ (29) ಮೃತರು. ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಸ್ನೇಹಿತರಾದ ಶ್ರೀಕಾಂತ್‌ ಮತ್ತು ಅಮಿತ್‌ ಎಂಬುವವರ ಜತೆ ಪ್ರವಾಸ ಬಂದಿದ್ದಾಗ ಶಮೀರ್‌ ರೆಹಮಾನ್‌ ಮೇಕೆದಾಟು ವಿನಲ್ಲಿ ರಭಸವಾಗಿ ಹರಿಯುವ ಕಾವೇರಿ ನದಿಯ ನೀರು ಮುಟ್ಟಲು ಹೋಗಿ ಕಾಲುಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಆತನನ್ನು ರಕ್ಷಿಸಲು ಹೋದ ಭವಾನಿ ಶಂಕರ್‌ ಕೂಡ ಕೊಚ್ಚಿಹೋಗಿದ್ದಾನೆ ಎಂದು ಶ್ರೀಕಾಂತ್‌ ಮತ್ತು ಅಮಿತ್‌ ಸಾತನೂರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮೃತದೇಹಗಳಿಗಾಗಿ ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸಂಜೆವರೆಗೂ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಮಂಗಳವಾರ ಶೋಧ ಕಾರ್ಯ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next