Advertisement

ಶೈಕ್ಷಣಿಕ ಪ್ರಗತಿಗೆ ಶಿಕ್ಷಕರ ಸಹಕಾರ ಅಗತ್ಯ: ಕಂಬಾರ

12:16 PM Jan 12, 2019 | |

ಕಕ್ಕೇರಾ: ಶೈಕ್ಷಣಿಕ ಪ್ರಗತಿ ಹೊಂದಲು ಶಿಕ್ಷಕರೊಂದಿಗೆ ಸಮುದಾಯದ ಸಹಕಾರ ಅವಶ್ಯವಾಗಿದೆ ಎಂದು ಅಕ್ಷರ ದಾಸೋಹ ತಾಲೂಕಾಧಿಕಾರಿ ಮೌನೇಶ ಕಂಬಾರ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬಿಸಿಯೂಟ ವಿತರಿಸಿ ಮಾತನಾಡಿದ ಅವರು, ಈ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೇ ಬಿಸಿಯೂಟ ಸೇವಿಸಬೇಕಾಗಿತ್ತು. ಸದ್ಯ ಪ್ರತ್ಯೇಕವಾಗಿ ಉರ್ದು ಶಾಲೆಗೆ ಬಿಸಿಯೂಟಕ್ಕೆ ಬೇಕಾಗುವ ಅಗತ್ಯ ಸೌಕರ್ಯ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಬಿಸಿಯೂಟಕ್ಕೆ ಯಾವುದೇ ಸಮಸ್ಯೆ ಆಗದು ಎಂದು ತಿಳಿಸಿದರು.

ಆರು ವರ್ಷದ ಪ್ರತಿಯೊಬ್ಬ ಮಕ್ಕಳನ್ನು ಪಾಲಕರು ಶಾಲೆಗೆ ಸೇರಿಸಿದಾಗ ಶಿಕ್ಷಣ ಸಂಬಂಧಿಸಿದ ಯೋಜನೆಗಳು ಸಾರ್ಥಕವಾಗಲಿವೆ. ಮಕ್ಕಳ ಸಂಖ್ಯೆ ದಾಖಲಾತಿ ಹೆಚ್ಚಿಸಿ ಶಿಕ್ಷಣ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಬಸವರಾಜ ಆರೇಶಂಕರ, ಗುಂಡಪ್ಪ ಸೊಲ್ಲಾಪುರ, ಬಿಆರ್‌ಪಿ ಕಾಂತೇಶ ಹಲಗಿಮನಿ, ಸಿಆರ್‌ಪಿಗಳಾದ ರವಿ ಕೋಟ್ಯಾಳ್‌, ಸಿಕಂದರ್‌, ನಾಗನಾಥ, ಬಸವರಾಜ ಗುತ್ತೇದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next