Advertisement

ಮಗುಚಿ ಬಿದ್ದ ಟಾಟಾ ಏಸ್ ವಾಹನ: 12 ಮಂದಿಗೆ ಗಾಯ, ನಾಲ್ವರು ಮಹಿಳೆಯರು ಗಂಭೀರ

09:07 AM Dec 20, 2020 | keerthan |

ಹುಣಸೂರು: ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ವಾಹನ ಮಗುಚಿ ಬಿದ್ದು 12 ಮಂದಿ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಹುಣಸೂರು ಎಚ್ ಡಿ ಕೋಟೆ ಗಡಿಭಾಗದಲ್ಲಿ ನಡೆದಿದೆ.

Advertisement

ಹುಣಸೂರು ತಾಲೂಕಿನ ಗೋಹಳ್ಳಿ ಗ್ರಾಮದ 12 ಮಂದಿ ಗ್ರಾಮಸ್ಥರು ನಂಜನಗೂಡಿನ ಶ್ರೀಕಂಠೇಶ್ವರ ದೇವರ ದರ್ಶನ ಪಡೆಯಲು ಟಾಟಾ ಏಸ್ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಹುಣಸೂರು ಎಚ್ ಡಿ ಕೋಟೆ ಗಡಿಭಾಗದ ಆಲನಹಳ್ಳಿ ಕೃಷ್ಣ ಅವರ ತೋಟದ ಬಳಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಮಗುಚಿ ಬಿದ್ದಿಬಿದ್ದಿದೆ. ಪರಿಣಾಮ ವಾಹನದಲ್ಲಿದ್ದ ನಾಲ್ಕು ಮಕ್ಕಳು ಮಹಿಳೆಯರು ಸೇರಿದಂತೆ ಒಟ್ಟು 12 ಮಂದಿ ಗಾಯಗೊಂಡಿದ್ದಾರೆ.

ಈ ಪೈಕಿ ನಾಲ್ಕು ಮಂದಿ ಮಹಿಳೆಯರು ಗಂಭೀರವಾಗಿ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಇನ್ನುಳಿದವರಿಗೆ ಕೈ, ಕಾಲು, ಬೆನ್ನು, ಮೂಳೆಗಳು ಮುರಿದಿದ್ದು ಎಲ್ಲರೂ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ಸೋತರೂ ಕೆಲಸ ಮಾಡ್ತಾರಂತೆ ಈ ಸ್ಪರ್ಧಿ!: ವೈರಲ್ ಆಯ್ತು ಫೋಟೊ

ಗಾಯಗೊಂಡವರಲ್ಲಿ ಪಾರ್ವತಮ್ಮ(44), ಮಂಜುಳಾ (52), ಸುಜಾತ (30), ಕೆಂಪಮ್ಮ(55), ಪುಷ್ಪ (32), ನೀಲಾ(32) ಮಕ್ಕಳಾದ ಸಹನಾ (8) ಸಹನಾ (7 ) ಸೇರಿದಂತೆ ಇತರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಶಾಸಕ ಭೇಟಿ ಸಾಂತ್ವನ;

ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಹುಣಸೂರಿನ ಶಾಸಕ ಎಚ್ ಪಿ ಮಂಜುನಾಥ್ ಮೈಸೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ ಸಾಂತ್ವನ ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next