Advertisement

ಕ್ಯಾನ್ಸರ್ ಗೆ ಬಲಿಯಾದ ತಮಿಳು ನಟ ಆನಂದ್ ಕಣ್ಣನ್

06:14 PM Aug 17, 2021 | Team Udayavani |

ಮಹಾಮಾರಿ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ತಮಿಳು ಖ್ಯಾತ ನಟ ಹಾಗೂ ನಿರೂಪಕ ಆನಂದ್ ಕಣ್ಣನ್ ಸೋಮವಾರ (ಆ. 16) ಮಧ್ಯರಾತ್ರಿ ಸಾವನ್ನಪ್ಪಿದ್ದಾರೆ.

Advertisement

ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಇಹಲೋಕ ತೈಜಿಸಿದ್ದಾರೆ ನಿರ್ದೇಶಕ ವೆಂಕಟ್ ಪ್ರಭು ಟ್ಟಿಟರ್‌ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಪ್ರತಿಭಾವಂತ ನಟನಾಗಿದ್ದ ಆನಂದ ಅವರಿಗೆ ಕ್ಯಾನ್ಸರ್ ಇದ್ದದ್ದು ಆಪ್ತರಿಗೆ ಮಾತ್ರ ತಿಳಿದಿತ್ತು. ಆನಂದ್ ಕಣ್ಣನ್ ಸಿಂಹಪೂರ್‌ದಲ್ಲಿ ವಸಂತಮ್ ಟಿವಿಯಲ್ಲಿ ಕೆಲಸ ಮಾಡುವ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು. ಆನಂತರ ಚಿನ್ನೈಗೆ ಆಗಮಿಸಿ ಸನ್‌ ಮ್ಯೂಸಿಕ್‌ ಚಾನೆಲ್‌ನಲ್ಲಿ ವಿಡಿಯೋ ಜಾಕಿಯಾಗಿ ಸೇರಿಕೊಂಡರು. ವೆಂಕಟ್ ನಿರ್ದೇಶನ ‘ಸರೋಜಾ’ ಚಿತ್ರದಲ್ಲಿ ಅಭಿನಯಿಸಿದ್ದಾರೆ. 2012ರಲ್ಲಿ ಬಿಡುಗಡೆಯಾದ ‘ ಆದಿಸಾಯ ಉಳಗಂ’ ಚಿತ್ರದಲ್ಲೂ ಅಭಿನಯಿಸಿದ್ದಾರೆ.

ಆನಂದ ಕಣ್ಣನ್ ಅವರಿಗೆ 2013ರಲ್ಲಿ ವಿಶ್ವ ವಿಶ್ವವಿದ್ಯಾಲಯ ತಮಿಳು ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಯೂತ್ ಐಕಾನ್ ಮತ್ತು ದೂರದರ್ಶನ ನಟರ ಸಂಘದ (ದಕ್ಷಿಣ ಭಾರತ) ‘ಅತ್ಯುತ್ತಮ ನಟ’ ಪ್ರಶಸ್ತಿ ನೀಡಲಾಗಿತ್ತು. ಸವಾಲ್ ಸಿಂಗಾಪುರ್‌ಗಾಗಿ ಅವರನ್ನು ‘ಅತ್ಯುತ್ತಮ ಹೋಸ್ಟ್’ ಎಂದು ಗೌರವಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next